ಶಹೀನ್ ಬಾಗ್ ಹೋರಾಟದ ವೇಳೆ ಗುಂಡು ಹಾರಿಸಿದ್ದ ಕಪಿಲ್ ಗುಜ್ಜರ್ ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಉಚ್ಛಾಟನೆ

Prasthutha|

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದ ಕಪಿಲ್ ಗುಜ್ಜರ್ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡ ಕೆಲವೇ ಗಂಟೆಗಳಲ್ಲಿ ಉಚ್ಛಾಟನೆಗೊಂಡಿದ್ದಾನೆ.

- Advertisement -

ಅವರ ಹಿನ್ನೆಲೆ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಶಹೀನ್ ಬಾಗ್ ಕೃತ್ಯ ತಿಳಿಯುತ್ತಿದ್ದಂತೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಘಾಝಿಯಾಬಾದ್ ಬಿಜೆಪಿ ಮುಖ್ಯಸ್ಥ ಸಂಜೀವ್ ಶರ್ಮಾ ಹೇಳಿದ್ದಾರೆ.

ಪೂರ್ವ ದೆಹಲಿಯ ದಲ್ಲುಪುರ ನಿವಾಸಿ ಕಪಿಲ್ ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿ ನಿನ್ನೆ ಬಿಜೆಪಿ ಸೇರಿದ್ದ. ಶಹೀನ್ ಬಾಗ್ ಪ್ರತಿಭಟನೆ ವೇಳೆ ಮೂರು ಸುತ್ತು ಗುಂಡು ಹಾರಿಸಿ, ಪ್ರತಿಭಟನಕಾರರಲ್ಲಿ ಈತ ಆತಂಕ ಮೂಡಿಸಿದ್ದ.

Join Whatsapp