ಎಪಿ ಉಸ್ತಾದರಿಗೆ ಶಾಂತಿ ಪ್ರಶಸ್ತಿ ಪ್ರದಾನ

Prasthutha|

ಅಬುಧಾಬಿ: ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಶಾಂತಿ ಪ್ರಶಸ್ತಿ ಲಭಿಸಿದೆ. ಫೋರಂ ಫಾರ್ ಪ್ರೊಮೋಟಿಂಗ್ ಪೀಸ್ ಇನ್ ಇಸ್ಲಾಮ್ ಸೊಸೈಟೀಸ್ ಇದರ ಆಶ್ರಯದಲ್ಲಿ ಅಬುಧಾಬಿಯಲ್ಲಿ ನಡೆದ 8 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಮಿತಿಯ ಚೇರ್ಮೆನ್, ಯುಎಇ ಫತ್ವಾ ಕೌನ್ಸಿಲ್ ಮುಖ್ಯಸ್ಥ ಶೇಖ್ ಅಬ್ದುಲ್ಲಾ ಬಿನ್ ಬಯ್ಯ ಅವರು ಕಾಂತಪುರಂ ಉಸ್ತಾದರಿಗೆ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

- Advertisement -

ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡುವಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿವಿಧ ಅಂತಾರಾಷ್ಟ್ರೀಯ ಸಮುದಾಯಗಳ ಸಹಯೋಗದಲ್ಲಿ ನಡೆದ ಸಮ್ಮೇಳನದಲ್ಲಿ ಡಾ.ಸಯೀದ್ ಇಬ್ರಾಹಿಂ ಶೈಬಿ, ಬಹ್ರೈನ್ ಸುನ್ನಿ ವಕ್ಫ್ ಬೋರ್ಡ್ ನ ನಿರ್ದೇಶಕ ಡಾ.ರಶೀದ್ ಬಿನ್ ಮುಹಮ್ಮದ್ ಅಲ್ ಹಾಜಿರಿ, ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಅಲ್ ಖಾದಿರಿ ಸೇರಿದಂತೆ ಪ್ರಪಂಚದಾದ್ಯಂತದ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Join Whatsapp