ಹಲಾಲ್ ಗೆ ಬಹಿಷ್ಕಾರ: ಕೋಳಿಯ ಕತ್ತು ಕೊಯ್ದ ಕಾಳಿ ಸ್ವಾಮಿ

Prasthutha|

ಬೆಂಗಳೂರು: ಹಲಾಲ್ ಗೆ ಬಹಿಷ್ಕಾರ  ಆಂದೋಲನ ಮಾಡುವುದಾಗಿ ತಿಳಿಸಿದ ಕಾಳಿ ಸ್ವಾಮಿ ಸ್ವತಃ ತಾವೇ ಕೋಳಿ ಕತ್ತರಿಸಿ ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಚಾಲನೆ ನೀಡಿದರು.

- Advertisement -

ನಾಟಿ ಕೋಳಿ ಬಲಿ ನೀಡಿ ಬಳಿಕ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದಾರೆ. ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ. ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ ಎಂದು ರಾಜಸಿ, ತಾಮಸಿ ಗುಣಗಳ ಯತಿಗಳು ನಿಮ್ಮ ಭಕ್ತರಿಗೆ ತಿಳಿಸಿ ಎಂದು ಹೇಳಿದ್ದಾರೆ.

ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಿಸಿದಂತೆ. ಇದನ್ನು ತಂದು ನಾವು ಹಬ್ಬ ಹರಿದಿನಗಳನ್ನು ಮಾಡಬೇಕಾದ ಸ್ಥಿತಿ ಇದೆ. ಹಲಾಲ್ ಬಾಯ್ಕಾಟ್ ಮಾಡುವ ಅಭಿಯಾನ ರಾಜ್ಯಾದ್ಯಂತ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Join Whatsapp