ಪಿಎಂ ಇಕ್ಬಾಲ್ ಕೈರಂಗಳ‌ಗೆ ಕಲಾರತ್ನ ಪ್ರಶಸ್ತಿ ಪ್ರದಾನ

Prasthutha|

ಮಂಗಳೂರು: ಹವ್ಯಾಸಿ ಪತ್ರಕರ್ತ, ಕಥೆಗಾರ ಪಿಎಂ ಇಕ್ಬಾಲ್ ಕೈರಂಗಳ ಅವರನ್ನು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

- Advertisement -

ಮಂಗಳೂರಿನಲ್ಲಿ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ನಾಡಿನ ಕೆಲವು ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಿತು.

ಪಿಎಂ ಇಕ್ಬಾಲ್ ಕೈರಂಗಳ ಕಥೆಗಾರರಾಗಿ, ಲೇಖಕರಾಗಿ ಕನ್ನಡಿಗರಿಗೆ ಪರಿಚಿತರು. ವಿವಿಧ ಪತ್ರಿಕೆಗಳಲ್ಲಿ ಅವರ ಕಥೆಗಳು, ಲೇಖನಗಳು ಪ್ರಕಟಗೊಂಡಿವೆ. ಪ್ರಸಕ್ತ ವಿದ್ಯಮಾನಗಳ ಕುರಿತು ಅಂಕಣಗಾರರಾಗಿಯೂ ವಿವಿಧ ಮಾಧ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ಸಂಸ್ಥೆ ಪಿಎಂ ಇಕ್ಬಾಲ್ ಕೈರಂಗಳ ಅವರ ಸಾಹಿತ್ಯ ಸೇವೆಯನ್ನು ಗೌರವಿಸಿ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ.



Join Whatsapp