ಕಲಬುರಗಿ: ಯುವಕನ ಬರ್ಬರ ಹತ್ಯೆ

Prasthutha|

ಕಲಬುರಗಿ: ಜಿಲ್ಲೆಯ ಅಫ್ಜಲ್‌ಪುರದಲ್ಲಿ ಯುವಕನನ್ನು ಹಾಡ ಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾದ ಘಟನೆ‌ ನಡೆದಿದೆ.

- Advertisement -

ರಂಝಾನ್ ಮೆಹಬೂಬ್ (24) ಹತ್ಯೆಯಾದ ಯುವಕ ಎಂದು ಹೇಳಲಾಗುತ್ತಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅಫ್ಜಲ್‌ಪುರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.

ಇತ್ತೀಚಿಗೆ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಅಲ್ಲದೆ, ಇದೇ ಅಫ್ಜಲ್‌ಪುರ ತಾಲೂಕಿನಲ್ಲಿ ಸಂಸದ ಉಮೇಶ್ ಜಾಧವ್ ಆಪ್ತ ಎನ್ನಲಾದ ಯುವಕನನ್ನು ಪಾರ್ಟಿ ಹೆಸರಲ್ಲಿ ಕರೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈಯಲಾಗಿತ್ತು. ಕಲಬುರಗಿ ಜಿಲ್ಲೆ ಕೂಡ ಒಂದು ಅಪರಾಧ ಚಟುವಟಿಕೆಗಳ ತಾಣ ಆಗಿ ಬದಲಾಗುತ್ತಿರುವುದರ ಬಗ್ಗೆ ಸಾರ್ಬಜನಿಕ ಆತಂಕ ವ್ಯಕ್ತವಾಗಿದೆ.



Join Whatsapp