SDPI ಕಾರ್ಯಕರ್ತ ಝೈನುಲ್ ಆಬಿದ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷ್ ಆತ್ಮಹತ್ಯೆ

Prasthutha|

ಕಾಸರಗೋಡು: ಎಸ್ ಡಿಪಿಐ ಕಾರ್ಯಕರ್ತ ಝೈನುಲ್ ಆಬಿದ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಘಪರಿವಾರದ ಕಾರ್ಯಕರ್ತ ಜ್ಯೋತಿಷ್ ಎಂಬಾತ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

ಜೆ.ಪಿ.ಕಾಲೋನಿ ನಿವಾಸಿ ಜ್ಯೋತಿಷ್ ವಿರುದ್ಧ ಇತ್ತೀಚೆಗೆ ಗೂಂಡಾ (ಕಾಪಾ) ಕಾಯ್ದೆ ದಾಖಲಿಸಿದ್ದರು.

ಕಳೆದ ರಾತ್ರಿ ಮನೆಯಲ್ಲಿ ಮಲಗಿದ್ದ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ ಈತನ ಪತ್ತೆ ಇರಲಿಲ್ಲ. ಕುಟುಂಬದವರು ಹುಡುಕಾಡಿದಾಗ ಮನೆ ಸಮೀಪದ ಮರವೊಂದರಲ್ಲಿ ಅವರ ಮೃತದೇಹ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

2008ರಲ್ಲಿ ಕಾಸರಗೋಡು ಸಿನಾನ್ ಕೊಲೆ ಪ್ರಕರಣ, 2011ರಲ್ಲಿ ಜನವರಿಯಲ್ಲಿ ನಡೆದ ರಿಷಾದ್ ಕೊಲೆ ಹಾಗೂ 2014ರಲ್ಲಿ ನಡೆದ ಎಸ್ ಡಿಪಿಐ ಝೈನುಲ್ ಆಬಿದೀನ್ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ಹಾಗೂ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.



Join Whatsapp