ಜೂ.29: ವಿದೇಶ ವ್ಯಾಸಂಗ ಇಚ್ಛಿಸುವ ವಿದ್ಯಾರ್ಥಿಗಳಿಗೆ ಸಾಲ, ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ ಶಿಬಿರ

Prasthutha|

ಮಂಗಳೂರು: ವಿದೇಶದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲಿಚ್ಚಿಸುವ ಬ್ಯಾರಿ ಸಮುದಾಯದ ಪದವೀಧರ ವಿದ್ಯಾರ್ಥಿಗಳಿಗೆ ಸರಕಾರದ ಮೂಲಕ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುವ ಕುರಿತಂತೆ ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿ ವತಿಯಿಂದ ಜೂ.29ರಂದು ಮಾಹಿತಿ ಸಶಿಬಿರ ನಡೆಯಲಿದೆ.

- Advertisement -

ಅಪರಾಹ್ನ 2:30ಕ್ಕೆ ನಗರದ ಸ್ಟೇಟ್‌ ಬ್ಯಾಂಕ್ ಸಮೀಪದ ನ್ಯಾಷನಲ್ ಟ್ಯೂಟೋರಿಯಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವವರು ಜೂ.27ರ ಸಂಜೆ 6ರೊಳಗೆ ಯೂಸುಫ್ ವಕ್ತಾರ್ (9008503993)/ಇಬ್ರಾಹೀಂ ನಡುಪದವು (9448620793)/ನಿಸಾರ್ ಫಕೀರ್ ಮುಹಮ್ಮದ್ (9845161416)ರನ್ನು ಸಂಪರ್ಕಿಸಬಹುದು ಎಂದು ಪರಿಷತ್ ಅಧ್ಯಕ್ಷ ಯು.ಎಚ್.ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp