ಕ್ಷುಲ್ಲಕ ಕಾರಣಕ್ಕೆ ಪತ್ರಕರ್ತನ ಕೊಲೆ ; ಮೂವರು ಆರೋಪಿಗಳ ಬಂಧನ

Prasthutha|

ಶಹರಾನ್’ಪುರ್; ಕಾರನ್ನು ಓವರ್’ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆಯಲ್ಲಿ ಪತ್ರಕರ್ತನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಮೂವರನ್ನು ಬಂಧಿಸುವಲ್ಲಿ ಉತ್ತರ ಪ್ರದೇಶದ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -


ಘಟನೆಗೆ ಸಂಬಂಧಿಸಿದಂತೆ ಜಹಾಂಗೀರ್, ಫರ್ಮಾನ್ ಹಾಗೂ ಮನ್ನಾನ್’ರನ್ನು ಬಂಧಿಸಿರುವುದಾಗಿ ಶಹರಾನ್’ಪುರ್ SP ಆಕಾಶ್ ತೋಮರ್ ಮಾಹಿತಿ ನೀಡಿದ್ದಾರೆ. ಜಹಾಂಗೀರ್ ಹಾಗೂ ಫರ್ಮಾನ್’ನನ್ನು ಘಟನೆ ನಡೆದ ದಿನವೇ ಬಂಧಿಲಾಗಿತ್ತು. ಮನ್ನಾನ್ ಗುರುವಾರ ಪೊಲಿಸರ ಬಲೆಗೆ ಬಿದ್ದಿದ್ದಾನೆ.

ಶಾ ಟೈಮ್ಸ್ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುಧೀರ್ ಸೈನಿ ಎಂಬುವವರು ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ತನ್ನ ಬೈಕ್’ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಕಾರೊಂದನ್ನು ಓವರ್’ಟೇಕ್ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಕಾರಲ್ಲಿದ್ದ ಮೂವರು ಸುಧೀರ್ ಸೈನಿಯನ್ನು ತಡೆದು, ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸೈನಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.

Join Whatsapp