ಝಮೀರ್’ಗೆ ಬಿಜೆಪಿಯ ಮಹಾನಾಯಕನ ಬೆಂಬಲ ಇದೆ: ಯತ್ನಾಳ್ ಆರೋಪ

Prasthutha|

ವಿಜಯಪುರ: ಝಮೀರ್’ ಗೆ ಬಿಜೆಪಿಯ ಒಬ್ಬ ಮಹಾನಾಯಕನ ಬೆಂಬಲ ಇದೆ. ಝಮೀರ್ ಅಹ್ಮದ್ ವಿರುದ್ಧ ಕೇಸ್ ದಾಖಲು ಮಾಡಬೇಕು ಎಂದು  ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ.

- Advertisement -

ಹಳೇ ಹುಬ್ಬಳ್ಳಿ ದಾಂಧಲೆ ಪ್ರಕರಣದ ಆರೋಪಿಗಳಿಗೆ ಶಾಸಕ ಝಮೀರ್ ಅಹ್ಮದ್  ಅವರು ಆಹಾರದ ಕಿಟ್ ವಿತರಣೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಯತ್ನಾಳ್​, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಝಮೀರ್‌ ನನ್ನು ಒದ್ದು ಒಳಗೆ ಹಾಕಬೇಕು. ಝಮೀರ್ ಹಿಂದೂ ವಿರೋಧಿ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ಝಮೀರ್‌ಗೆ ನಮ್ಮ ಸರ್ಕಾರದ ಸಲುಗೆ ಇದೆ, ಎಲ್ಲಾ ಹೊಂದಾಣಿಕೆ ಇದೆ. ಬಿಜೆಪಿಯ ಒಬ್ಬ ಮಹಾನಾಯಕನ ಬೆಂಬಲ ಝಮೀರ್​ ಗೆ ಇದೆ, ಅವರದ್ದೆಲ್ಲ ಒಂದೇ ಬ್ಯುಸಿನೆಸ್ ಎಂದು ತಿಳಿಸಿದರು.



Join Whatsapp