ಬಿಜೆಪಿಗೆ ವಾಪಸ್ಸಾಗುವಂತೆ ಒತ್ತಡ ಹೇರುತ್ತಿರುವುದು ಸತ್ಯ: ಲಕ್ಷ್ಮಣ ಸವದಿ

Prasthutha|

ಬೆಳಗಾವಿ: ಹಿಂದೆ ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಮರಳಿ ಬಿಜೆಪಿಗೆ ವಾಪಸ್ಸಾಗುವಂತೆ ತನ್ನ ಮೇಲೆ ಒತ್ತಡ ಹೇರುತ್ತಿರುವುದು ನಿಜ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

- Advertisement -


ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತನ್ನ ನಿಲುವಿನ ಜೊತೆ ಜಗದೀಶ್ ಶೆಟ್ಟರ್ ಪ್ರಕರಣವನ್ನು ಥಳಕು ಹಾಕೋದು ಬೇಡ, ತಾನು ಅವರಿಗಿಂತ ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದು ಮತ್ತು ತಾನು ಸೇರಿದ ಬಳಿಕ ಶೆಟ್ಟರ್ ಸೇರ್ಪಡೆಯಾದರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತನಗೆ ಜನ ಭಾರೀ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ ಎಂದು ಹೇಳಿದ ಶಾಸಕರು ತನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದರು.

Join Whatsapp