ಮದ್ಯ ಕುಡಿದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ಮದ್ಯದಂಗಡಿಯವರ ಜವಾಬ್ದಾರಿ: ಗೋವಾ ಸಚಿವ

Prasthutha|

ಪಣಜಿ: ಬಾರ್ ನಲ್ಲಿ ಕುಡಿದವರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸುವುದು ಸಂಬಂಧಪಟ್ಟ ಮದ್ಯದ ಅಂಗಡಿಯ ಮಾಲೀಕರ ಜವಾಬ್ದಾರಿಯೆಂದು ಗೋವಾ ಸಚಿವ ಮೌವಿನ್ ಗೋಡಿನ್ಹೊ ಹೇಳಿದ್ದಾರೆ.

- Advertisement -

ಗೋವಾದಲ್ಲಿ ಮದ್ಯದ ದರ ಅಗ್ಗವಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಪ್ರವಾಸಿಗರು ಹಾಗೂ ಹೆಚ್ಚಿನ ಜನರು ಬೇಕಾಬಿಟ್ಟಿಯಾಗಿ ಕುಡಿದು ವಾಹನ ಚಲಾಯಿಸುತ್ತಾರೆ ಮತ್ತು ಅನುಚಿತವಾಗಿ ವರ್ತಿಸುತ್ತಾರೆ. ಈ ಕಾರಣದಿಂದ ಅಪಘಾತದ ಪ್ರಕರಣವೂ ಹೆಚ್ವಾಗಿದೆ. ದೊಂಬಿ ,ಕಲಹಗಳೂ ಹೆಚ್ಚಾಗಿದೆ’ ಎಂದು ಅವರು ಹೇಳಿದ್ದಾರೆ.

ಕುಡಿದವರನ್ನು ಸಮರ್ಪಕವಾಗಿ ಅವರ ಮನೆಗೆ, ಏನೂ ಆಘಾತ ಸಂಭವಿಸದ ರೂಪದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸುವಲ್ಲಿ ಬಾರ್ ಮಾಲೀಕರು ಪಾತ್ರ ವಹಿಸಬೇಕು. ಇದು ಅವರ ನೇರ ಜವಾಬ್ದಾರಿ. ಈ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದಿದ್ದಾರೆ.

- Advertisement -

ಈ ನಿಲುವು ಗೋವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

Join Whatsapp