ಐದು ನಿಮಿಷದ ನಮಾಝನ್ನು ಕೋಮುವಾದಿಗಳು ಧರ್ಮ ಸಂಘರ್ಷಕ್ಕೆ ಬಳಸಿಕೊಂಡಿರುವುದು ಅನಿರೀಕ್ಷಿತವಲ್ಲ: ಎಸ್‌ಡಿಪಿಐ

Prasthutha|

ಮಂಗಳೂರು: ಅನೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ವಿವಿಧ ಧರ್ಮೀಯರು ಹಬ್ಬ ಹರಿದಿನಗಳನ್ನು ಆಚರಿಸುವಾಗ ವಾಣಿಜ್ಯ ಪ್ರದೇಶಕ್ಕಿಂತ ತುಂಬಾ ದೂರದಲ್ಲಿರುವ ಒಳ ರಸ್ತೆಯ ಒಂದು ಬದಿಯಲ್ಲಿ ಕೇವಲ ಐದು ನಿಮಿಷ ಕಾಲ ನಮಾಝ್ ನಿರ್ವಹಿಸಿದ್ದನ್ನು ಬಕ ಪಕ್ಷಿಯಂತೆ ಕಾಯುತ್ತಿರುವ ಶರಣ್ ಪಂಪ್‌ವೆಲ್ ನಂತಹ ಕೋಮುವಾದಿಗಳು ಧರ್ಮ ಸಂಘರ್ಷಕ್ಕೆ ಬಳಸಿಕೊಂಡಿರುವುದು ಅನಿರೀಕ್ಷಿತವಲ್ಲ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದ್ದಾರೆ.

- Advertisement -

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅನ್ವರ್ ಸಾದತ್, ಮೊದಲು ಸಾಮೂಹಿಕ ಹನುಮಾನ್ ಚಾಲಿಸಾವನ್ನು ಈಶ್ವರಿ ಮ್ಯಾನ್ ಪವರ್ ಕಛೇರಿಯೊಳಗೆ ನಡೆಸಲಿ. ಅಲ್ಲಿ ಶುದ್ಧೀಕರಣವಾದ ನಂತರ ಬೀದಿಗೆ ಬರಲಿ ಎಂದು ಭಜರಂಗದಳದ ವಿರುದ್ಧ ಆಕ್ರೋಶ ಹೊರಹಾಕಿದರು.



Join Whatsapp