ಈಶ್ವರಪ್ಪ ರಾಜೀನಾಮೆ ಹಿಂದೆ ಬಿಜೆಪಿ ‘ಯುವ ನಾಯಕ’ನ ಕೈವಾಡ; ಯತ್ನಾಳ್ ಹೊಸ ಬಾಂಬ್

Prasthutha|

ವಿಜಯಪುರ: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈಶ್ವರಪ್ಪ ಕೇಸ್ ಹಿಂದೆ ಬಿಜೆಪಿ ಯುವನಾಯಕನೊಬ್ಬ ಇದ್ದಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

- Advertisement -

ಕಾಂಗ್ರೆಸ್ ಮಹಾನಾಯಕನ ಜೊತೆ ಸೇರಿ ಬಿಜೆಪಿ ಯುವನಾಯಕ ಕುತಂತ್ರ ನಡೆಸುತ್ತಿದ್ದಾರೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ರಮೇಶ ಜಾರಕಿಹೊಳಿ ನಿನ್ನೆ ನೀಡಿದ ಹೇಳಿಕೆಗೆ ಧ್ವನಿಗೂಡಿಸಿ, ರಮೇಶ ಜಾರಕಿಹೊಳಿ ಹೇಳಿದ್ದು ಸತ್ಯ ಇದೆ, ಬಿಜೆಪಿಯಲ್ಲೂ ಒಂದು CD ಟೀಮ್ ಇದೆ. ಕಾಂಗ್ರೆಸ್ ನಲ್ಲೂ ಒಂದು CD ಟೀಮ್ ಇದೆ.

- Advertisement -

ಮಹಾಕಳ್ಳ ಮತ್ತು ಬಿಜೆಪಿ ಕಳ್ಳ ಸೇರಿ ಈ ಕೆಲಸ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಎರಡು CD ಕಾರ್ಖಾನೆಗಳು ಇವೆ. ಬಿಜೆಪಿಯಲ್ಲಿ  ಮೂರ್ಖ ಯುವನಾಯಕ ಇದ್ದಾನೆ, ಅವರಿಬ್ಬರು ಸೇರಿ ಇದನ್ನು ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

Join Whatsapp