ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ನೀಡುವಂತೆ ಅಯೋಧ್ಯೆ ಟ್ರಸ್ಟ್​ ಗೆ ಪತ್ರ: ಇಕ್ಬಾಲ್ ಹುಸೇನ್

Prasthutha|

ರಾಮನಗರ: ಗಣೇಶ್ ಭಟ್ ಕೆತ್ತಿರುವ ಶ್ರೀರಾಮ ಮೂರ್ತಿ ನೀಡುವಂತೆ ಕೋರಿ ಅಯೋದ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ಗೆ ಪತ್ರ ಬರೆಯಲು ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮುಂದಾಗಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ಅವರು, ರಾಮನಗರದಲ್ಲಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಶಿಲ್ಪಿ ಗಣೇಶ್ ಭಟ್ ಕೆತ್ತನೆಯ ಶ್ರೀರಾಮನ ವಿಗ್ರಹವನ್ನು ನೀಡುವಂತೆ ಕೋರಿ ಪತ್ರ ಬರೆಯಲಾಗುವುದು ಎಂದಿದ್ದಾರೆ.

ಅಯೋಧ್ಯೆಯಲ್ಲಿ ಮೂರು ವಿಗ್ರಹ ಪೈಕಿ ಕನ್ನಡಿಗ ಗಣೇಶ್ ಭಟ್ ವಿಗ್ರಹವನ್ನು ರಾಮನಗರಕ್ಕೆ ನೀಡುವಂತೆ ಪತ್ರ ಬರೆಯಲಾಗುವುದು. ಗಣೇಶ್ ಭಟ್ ಅವರು ನಿನ್ನೆ ಕರೆಮಾಡಿದ್ದರು. ಜಿಲ್ಲೆಯ ಪರವಾಗಿ ಅವರಿಗೆ ಶುಭಾಶಯ ತಿಳಿಸಿದ್ದೇನೆ. ಸೂಕ್ಷ್ಮವಾದ ವಿಷಯ ನಿಜವಾದ ರಾಮಭಕ್ತರು ಎಂದು ತೋರುತ್ತದೆ. ವಿಗ್ರಹಕ್ಕಾಗಿ ಖಂಡಿತವಾಗಿಯೂ ಪತ್ರ ಬರೆಯುತ್ತೇನೆ ಎಂದರು.



Join Whatsapp