ರಜಪೂತ ಸಮಾಜಕ್ಕೆ ಅವಮಾನ: ಸಿಟಿ ರವಿ ವಿರುದ್ಧ ಪ್ರತಿಭಟನೆ

Prasthutha|

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸಂಸದ ಸಿಟಿ ರವಿ ರಜಪೂತ ಸಮಾಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ರಜಪೂತ ಸಮಾಜದ ಸದಸ್ಯರು ಸಿಟಿರವಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

- Advertisement -

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಜಪೂತ ಸಮಾಜದ ಯಾವುದೇ ಕೊಡುಗೆಯಿಲ್ಲ ಎಂದು ಸಿಟಿ ರವಿ ಇತ್ತೀಚಗೆ ಟಿವಿ ವಾಹಿನಿಯಲ್ಲಿ ಹೇಳಿದ್ದರು. ಇದನ್ನು ಖಂಡಿಸಿದ ರಜಪೂತ ಸಮಾಜ ಪ್ರತಿಭಟನೆ ನಡೆಸಿದ್ದು, ಸಿಟಿ ರವಿಯವರಿಗೆ ಸಾಮಾನ್ಯ ಅರಿವು ಇಲ್ಲ, ಅವರಿಗೆ ಇತಿಹಾಸದ ಪರಿಜ್ಞಾನ ಇಲ್ಲ. ಎಂದು ಟೀಕಿಸಿದರು.

ಸಮಾಜದ ಅಧ್ಯಕ್ಷ ಹರಿಸಿಂಗ ಮೂಲಿಮನಿ ಅವರ ನೇತೃತ್ವದಲ್ಲಿ ,ಅಂಭಾಭವಾನಿ ಮಂದಿರದಿಂದ ಖಾಸ್ಗತೇಶ್ವರ ಮಠದ ರಸ್ತೆ, ಕತ್ತರಿ ಬಜಾರ, ಎಂಜಿ ರೋಡ್, ಶಿವಾಜಿವೃತ್ತದ ಮೂಲಕ ಸಾಗಿದ ಪ್ರತಿಭಟನಾಕಾರರು ರಾಣಾ ಪ್ರತಾಪ ಸಿಂಹ ವೃತ್ತದ ಬಳಿ ಸೇರಿದರು. ಅಲ್ಲಿ ಸಿಟಿ ರವಿಯವರ ಪ್ರಕೃತಿ ದಹನ ನಡೆಸಿದರು.

Join Whatsapp