ಎಂಟು ಮಂದಿ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

Prasthutha|

ನವದೆಹಲಿ: ಕತಾರ್ ನ್ಯಾಯಾಲಯವು ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ್ದು, ತೀರ್ಪು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

- Advertisement -


ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಮಂಗಳವಾರ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬಂಧಿತ ಭಾರತೀಯರಿಗೆ ಮತ್ತೊಮ್ಮೆ ಕಾನ್ಸುಲರ್ ಪ್ರವೇಶ ನೀಡಲಾಗಿದೆ. ಭಾರತವು ಅವರಿಗೆ ಎಲ್ಲಾ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದರು.

Join Whatsapp