ಗಾಳಿ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಇನಾಯತ್ ಅಲಿ ಭೇಟಿ, ಸಹಾಯಧನ ವಿತರಣೆ

Prasthutha|

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಟಿಪಳ್ಳ 5ನೇ ವಾರ್ಡ್‌ನ ಚೊಕ್ಕಬೆಟ್ಟು ಪ್ರದೇಶದಲ್ಲಿ ಭಾರೀ ಗಾಳಿ ಮಳೆಗೆ ಹಲವು ಮನೆಗಳು ಹಾನಿಗೊಂಡಿದ್ದು, ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿದ್ದಾರೆ. ಹಾನಿಗೊಳಗಾದ ಪ್ರತೀ ಮನೆಯವರನ್ನು ಭೇಟಿಯಾಗಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ ಅವರು ತಮ್ಮ ನೇತೃತ್ವದ ಫೌಂಡೇಶನ್ ವತಿಯಿಂದ ಸಹಾಯಧನ ವಿತರಿಸಿದ್ದಾರೆ.

- Advertisement -

ಈ ಸಂಧರ್ಭದಲ್ಲಿ ಸರ್ಕಾರದಿಂದ ಪ್ರಾಕೃತಿಕ ವಿಕೋಪದಡಿ ಪರಿಹಾರ ಧನವನ್ನು ಶೀಘ್ರವೇ ದೊರಕಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.



Join Whatsapp