ಪೊಲೀಸ್ ಭದ್ರತೆಯಲ್ಲಿ ಕುದುರೆಯೇರಿ ಬಂದ ದಲಿತ ಮದುಮಗ

Prasthutha|

ಕೋಟಾ: ಮೇಲ್ಜಾತಿಯವರ ಬೆದರಿಕೆ ಹಿನ್ನೆಲೆಯಲ್ಲಿ ದಲಿತ ಮಗುಮಗನೊಬ್ಬ ಪೊಲೀಸ್ ಭದ್ರತೆಯಲ್ಲಿ ಕುದುರೆ ಏರಿ ಕಲ್ಯಾಣ ಮಂಟಪಕ್ಕೆ ಬಂದ ಘಟನೆ ನಡೆದಿದೆ.

- Advertisement -

ರಾಜಸ್ತಾನದ ಬುಂದಿ ಜಿಲ್ಲೆಯಲ್ಲಿ ಚಾದಿ ಗ್ರಾಮದ 27 ವರ್ಷ ಪ್ರಾಯದ ಮದುಮಗ ಶ್ರೀರಾಂ ಮೇಘ್ ವಾಲ್ ಬಿಳಿಯ ಶೇರ್ವಾನಿ, ಬಲ ಭಾಗದಲ್ಲಿ ನೇತಾಡುವ ಖಡ್ಗ ಹಿಡಿದು ನಗು ಸೂಸುತ್ತ ಕುದುರೆಯೇರಿ ಮದುವೆ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದರು.

ದಲಿತರು ಈ ರೀತಿ ಬರಲು ಮೇಲ್ಜಾತಿಯವರು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಮೇಘ್ ವಾಲ್ ಪ್ರಕಾರ, ಈ ಭಾಗದಲ್ಲಿ ದಲಿತ ಮದುಮಗ ಹೀಗೆ ಬಂದುದು ಇದೇ ಮೊದಲು. ಅದಕ್ಕೆ ಸಂಬಂಧಿಸಿದವರು ಸಾಕಷ್ಟು ಪೊಲೀಸ್ ಬೆಂಗಾವಲು ಒದಗಿಸಿದ್ದರು. ಅವರಿಗೆಲ್ಲ ಧನ್ಯವಾದ ಎಂದೂ ಅವರು ಹೇಳಿದರು.

- Advertisement -

ಜೈಭೀಮ್ ಘೋಷಣೆಯೊಂದಿಗೆ ಡಿಜೆ ಸಂಗೀತ ಉದ್ದಕ್ಕೂ ಹಿಂದಿ ಗೀತೆಗಳೊಂದಿಗೆ ಮೆರವಣಿಗೆ ಜೊತೆ ಊರಿನ ಉದ್ದಗಲಕ್ಕೂ ಮೇಳವಿಸಿತು. ಪಂಚಾಯತಿಯಲ್ಲಿ ಗುತ್ತಿಗೆ ನೌಕರ ಆಗಿರುವ ಮೇಘ್ ವಾಲ್ ಹೇಳುತ್ತಾರೆ ಇದು ಸಮಾನತೆಯತ್ತ ಇನ್ನೊಂದು ಹೆಜ್ಜೆ.
ಬುಂದಿ ಜಿಲ್ಲಾ ಪೊಲೀಸರು ಈ ಮದುವೆಯ ಭದ್ರತೆಯ ಉಸ್ತುವಾರಿ ಹೊತ್ತಿದ್ದರು.

Join Whatsapp