ಪೊಲೀಸ್ ಲಾಠಿಗೆ ಹತ್ತು ತಿಂಗಳ ಮಗು ಬಲಿ!

Prasthutha|

ಬೋಪಾಲ್: ದಲಿತ ರೈತ ಕುಟುಂಬದ 10 ತಿಂಗಳ ಗಂಡು ಮಗುವೊಂದು ಪೊಲೀಸರ ಲಾಠಿ ಪ್ರಹಾರಕ್ಕೆ ಬಲಿಯಾದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಮಧ್ಯಪ್ರದೇಶದ ನರ್ವಾರ್ ತೆಹಸಿಲ್‌ ನ ಗ್ರಾಮವಾದ ರಾಮನಗರ ಗಡಾಯಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಿಂದ ಚರಂಡಿ ನೀರು ಹರಿದು ಹೋಗಲು ಕಾಲುವೆಗಳ ನಿರ್ಮಾಣದ ವಿವಾದದಿಂದಾಗಿ ಭುಗಿಲೆದ್ದ ಘರ್ಷಣೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಮಗು ಸಾವನ್ನಪ್ಪಿದೆ ಎಂದು ವರದಿಯಾಗಿದೆ.


ಕೊಳಚೆ ನೀರು ತಮ್ಮ ಜಮೀನಿಗೆ ಹರಿಯುವ ರೀತಿಯಲ್ಲಿ ಹೊಸ ಕಾಲುವೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟಿಸುವ ಸಂದರ್ಭದಲ್ಲಿ ಪೊಲೀಸರು ಬಂದು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

- Advertisement -


ಲಾಠಿಚಾರ್ಜ್ ನಲ್ಲಿ ಮಹಿಳೆಯರು ಮತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಇದೇ ವೇಳೆ ಗಾಯಗೊಂಡ 10 ತಿಂಗಳ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸಾವನ್ನಪ್ಪಿದೆ ಎಂದು ಸಂಬಂಧಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp