ಮಥುರಾ: ಗೋಹತ್ಯೆ ನೆಪದಲ್ಲಿ ಸಂಘಪರಿವಾರದಿಂದ ಕಿರುಕುಳ, ಮನೆ ತೊರೆಯುತ್ತಿರುವ ಮುಸ್ಲಿಮರು

Prasthutha|

ಮಥುರಾ: ಗೋಹತ್ಯೆಯ ಆರೋಪ ಹೊರಿಸಿ ಬಜರಂಗದಳದ ಕಾರ್ಯಕರ್ತರು ನಿರಂತರವಾಗಿ ಮುಸ್ಲಿಮರಿಗೆ ಕಿರುಕುಳ ನೀಡುತ್ತಿರುವ ಘಟನೆ ಉತ್ತರ ಪ್ರದೇಶದ ಮಥುರಾದಿಂದ ವರದಿಯಾಗಿದೆ.

- Advertisement -

ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯ ಮುಸ್ಲಿಮರು, ಬಜರಂಗದಳ ಕಾರ್ಯಕರ್ತರು ಆಗಮಿಸಿ ತುಂಬಾ ತೊಂದರೆ ನೀಡುತ್ತಿದ್ದು, ಕೆಟ್ಟ ಶಬ್ದಗಳಿಂದ ಹೀಯಾಳಿಸಿ ಅವಮಾನಿಸುತ್ತಿದ್ದಾರೆ. ಮಾತ್ರವಲ್ಲ ಪೊಲೀಸರು ನಮ್ಮ ಊರಿನವರವನ್ನು ವಿನಾಕಾರಣ ಬಂಧಿಸಿ ತೊಂದರೆ ನೀಡುತ್ತಿದ್ದಾರೆ. ತೀವ್ರ ತೊಂದರೆ ಅನುಭವಿಸುತ್ತಿರುವುದರಿಂದ ಊರಿನವರು ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ನ್ಯಾಯ ಕೊಡಿಸುವಂತೆ ಮಾಧ್ಯಮದ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಸಂಘಪರಿವಾರ ಮತ್ತು ಪೊಲೀಸರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Join Whatsapp