ಧ್ವನಿವರ್ಧಕ ಬಳಕೆ ವಿಚಾರಕ್ಕೆ ರಾಷ್ಟ್ರೀಯ ನೀತಿ ಜಾರಿಗೊಳಿಸಿ: ಸಂಜಯ್ ರಾವತ್

Prasthutha|

- Advertisement -

ಮುಂಬೈ: ಧ್ವನಿವರ್ಧಕ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಒತಾಯಿಸಿದ್ದಾರೆ.

ಶಿವಸೇನೆ ಮುಖಂಡ ಸಂಜಯ್ ರಾವತ್ ಮಾದ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರೀಯ ನೀತಿಯೊಂದು ಧನಿವರ್ಧಕ ಬಳಕೆ ವಿಚಾರದಲ್ಲಿ ಅಗತ್ಯವಾಗಿದೆ. ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಮೊದಲು ಈ ನೀತಿಯನ್ನು ಅಳವಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡುವುದಾಗಿ ಹೇಳಿದರು.

- Advertisement -

ಮಹಾರಾಷ್ಟ್ರವು ಈ ದೇಶದ ಕಾನೂನನ್ನು ಪಾಲಿಸುತ್ತದೆ. ಹಾಗಾಗಿ ಇಲ್ಲಿ ಸ್ವಯಂಚಾಲಿತವಾಗಿಯೇ ಅಂತಹ ನೀತಿಯನ್ನು ಜಾರಿಗೆ ತಂದಲ್ಲಿ ಅಳವಡಿಸಿಕೊಳ್ಳಲಾಗುವುದು. ಗುಜರಾತ್, ಉತ್ತರ ಪ್ರದೇಶ ಮುಂತಾದ ಬಿಜೆಪಿ ಆಡಳಿತವಿರುವೆಡೆ ಇನ್ನೂ ಧ್ವನಿವರ್ಧಕ ಬಳಸಲಾಗುತ್ತಿದೆ. ಧೈರ್ಯವಿದ್ದರೆ ರಾಷ್ಟ್ರೀಯ ನೀತಿ ಜಾರಿಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ ಎಂದು ಸವಾಲೆಸೆದಿದ್ದಾರೆ.

Join Whatsapp