ಹಿಂದೂ ರಾಷ್ಟ್ರ ಜಾಗೃತಿ ಸಭೆಯ ಕುರಿತು ಇಲ್ಯಾಸ್ ತುಂಬೆಯಿಂದ ಡಿಜಿಪಿಗೆ ಬಹಿರಂಗ ಪತ್ರ

Prasthutha|

ಮಂಗಳೂರು: ಮಂಗಳೂರಿನಲ್ಲಿ ಮಾರ್ಚ್ 12ರಂದು ನಡೆಸಲು ಉದ್ದೇಶಿಸಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾನ್ ನಿರ್ದೇಶಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆಯವರು ಬಹಿರಂಗ ಪತ್ರವನ್ನು ಬರೆದಿದ್ದಾರೆ.

- Advertisement -


ಈ ಸಭೆಯು ಸಂವಿಧಾನ ವಿರೋಧವಾಗಿದ್ದು, ದೇಶದ ಜಾತ್ಯತೀತ ಸ್ವರೂಪವನ್ನು ಕದಡುವ ವ್ಯವಸ್ಥಿತ ಹುನ್ನಾರದ ಭಾಗವಾಗಿದೆ. ಯಾವುದೇ ಧರ್ಮದ ಆಧಾರದಲ್ಲಿ ಈ ದೇಶವನ್ನು ಕಟ್ಟುವುದು ಎಂದು ಯಾರಾದರೂ ಘೋಷಣೆ ಮಾಡುವುದಾದರೆ ಅದು ದೇಶದ್ರೋಹಿ ಕಾನೂನಿಗೆ ಒಳಪಡುವುದಾಗಿದೆ. ಹಾಗಾಗಿ ಈ ಸಭೆಯ ಪ್ರಾಯೋಜಕರಾದ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದ್ದಾರೆ

Join Whatsapp