ನನ್ನನ್ನ ಜೈಲಿಗೆ ಹಾಕಿಸೋಕೆ ಸಂಚು ನಡೆಯುತ್ತಿದೆ, ವಿಜಯೇಂದ್ರ ಗಂಡಸಾಗಿದ್ದರೆ ದಾಖಲೆ ಕೊಡಲಿ: ಡಿಕೆ ಶಿವಕುಮಾರ್

Prasthutha|

ರಾಮನಗರ: ನನ್ನನ್ನು ಜೈಲಿಗೆ ಹಾಕಿಸುವುದಕ್ಕೆ ಸಂಚು ನಡೆಯುತ್ತಿದೆ. ವಿಜಯೇಂದ್ರ ಗಂಡಸಾಗಿದ್ದರೆ ದಾಖಲೆ ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

- Advertisement -


ಡಿಕೆಶಿ ಭ್ರಷ್ಟಾಚಾರದ ಪಿತಾಮಹ ಎಂಬ ವಿಜಯೇಂದ್ರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.


ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾರು ಸಿಎಂ ಆಗಿದ್ರು, ಯಾವ ಬ್ಯಾಂಕ್ ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳ್ತಿದ್ದಕ್ಕೆ ಅವ್ರು ಉತ್ತರ ಕೊಡಬೇಕು. ನಮ್ಮನ್ನ ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗೋಕು ರೆಡಿ ಇದ್ದೀನಿ ಎಂದು ತಿಳಿಸಿದ್ದಾರೆ.

- Advertisement -


ನನ್ನಂಥವರು ಬೇಕಾದಷ್ಟು ಜನ ಕಾಂಗ್ರೆಸ್ನಲ್ಲಿ ಹುಟ್ಟಿಕೊಳ್ಳುತ್ತಾರೆ. ವಿಜಯೇಂದ್ರನ ವಿರುದ್ಧ ಎಲ್ಲಾ ಆರೋಪಗಳನ್ನ ಬಿಚ್ಚಿ ಹೇಳುತ್ತೇನೆ. ಭ್ರಷ್ಟಾಚಾರದ ಪಿತಾಮಹ ಅಂದ್ರೆ ಏನು ಅಂತಾ ಹೇಳಬೇಕು. ವಿಜಯೇಂದ್ರಗೆ ತಾಕತ್ ಇದ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕೊಡಲಿ. ಗಂಡಸಾಗಿದ್ರೆ ಅವನು ಹೇಳಲಿ ಎಂದು ಸವಾಲು ಹಾಕಿದ್ದಾರೆ.



Join Whatsapp