ರಮೇಶ್ ಜಾರಕಿಹೊಳಿಗೆ ತಾಕತ್ತಿದ್ದರೆ ಸರಕಾರ ಬೀಳಿಸಲಿ: ಸಚಿವ ಲಾಡ್ ಸವಾಲು

Prasthutha|

ಧಾರವಾಡ : ರಾಜ್ಯ ಸರಕಾರವನ್ನು ಬೀಳಿಸುವ ಬಗ್ಗೆ ಪದೇ ಪದೇ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದಾರೆ, ಆ ಮಾದರಿ, ಈ ಮಾದರಿ ಎಂದೆಲ್ಲ ಹೇಳುತ್ತಿದ್ದಾರೆ. ಹೀಗೆಲ್ಲ ಮಾತಾಡೊ ಬದಲು ತಾಕತ್ತಿದ್ದರೆ ಸರಕಾರ ಬೀಳಿಸಲಿ. ಒಮ್ಮೆ ಸರಕಾರ ಕೆಡವಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇನು ಚೌಕಬಾರಾ ಆಟವಾ? ಪ್ರತಿಯೊಬ್ಬರು ಸರ್ಕಾರ ಕೆಡುವುತ್ತೇವೆ ಅಂತಾರೆ. ಮಹಾರಾಷ್ಟ್ರ ಮಾದರಿ, ಆ ಮಾದರಿ ಈ ಮಾದರಿ ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಬಿಜೆಪಿಗೆ ಆಸಕ್ತಿ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದು ನೂರು ದಿನ ಆಯ್ತು. ಈಗಲೂ ಅಭಿವೃದ್ಧಿ ಆಗಿಲ್ಲ ಎಂಬುದನ್ನೇ ಹೇಳುತ್ತಾ ಕೂತಿದ್ದಾರೆ ಎಂದರು‌.

- Advertisement -

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸಚಿವರ ಬದಲಾವಣೆ ಕೂಗು ಇರುವುದು ಸಹಜ. ಆದರೆ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.



Join Whatsapp