ವಯನಾಡ್ ಭೂಕುಸಿತ | ‘ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಿದ್ದರೆ ತಿಳಿಸಿ, ನನ್ನ ಪತ್ನಿ ಸಿದ್ಧಳಿದ್ದಾಳೆ’: ವಾಟ್ಸಾಪ್ ಸಂದೇಶ ವೈರಲ್

Prasthutha|

ವಯನಾಡ್: ವಯನಾಡ್ ನಲ್ಲಿ ಭೂಕುಸಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 256ಕ್ಕೇರಿದೆ. ಧಾರಾಕಾರ ಮಳೆಯಿಂದಾಗಿ ಪರಿಹಾರ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಇದುವರೆಗೆ ಪರಿಹಾರ ತಂಡಗಳು 1592 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.

- Advertisement -


ಈ ಎಲ್ಲ ಬೆಳವಣಿಗೆಗಳ ನಡುವೆ ವಿಭಿನ್ನವಾದ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಿದ್ದರೆ ತಿಳಿಸಿ…ನನ್ನ ಪತ್ನಿ ಸಿದ್ಧವಾಗಿದ್ದಾಳೆ’ ಎಂದು ವ್ಯಕ್ತಿಯೊಬ್ಬರು ವಾಟ್ಸಾಪ್ ಸಂದೇಶದ ಮೂಲಕ ಸ್ವಯಂ ಸೇವಕರಿಗೆ ತಿಳಿಸಿದ್ದಾರೆ.

- Advertisement -


ಈ ಸಂದೇಶವನ್ನು ಮಲಯಾಳಂನಲ್ಲಿ ಕಳುಹಿಸಲಾಗಿದ್ದು, ಕಳುಹಿಸಿದ ವ್ಯಕ್ತಿಯ ವಿವರ ಎಲ್ಲೂ ಲಭ್ಯವಾಗಿಲ್ಲ. ಆದರೂ, ಮಲಯಾಳಂ ಮಾಧ್ಯಮಗಳು ಇದನ್ನು ವರದಿ ಮಾಡಿದ್ದು, ವ್ಯಕ್ತಿ ಹಾಗೂ ಆತನ ಪತ್ನಿಯ ಮಾನವೀಯತೆಯ ಈ ಸಂದೇಶ ಹಲವಾರು ಮಂದಿಯ ಹೃದಯ ಕಲಕಿದೆ.



Join Whatsapp