ಕೊಲೆಯಾದರೆ ಸಿಎಂ ಯೋಗಿ, ಸಿಜೆಐಗೆ ಪತ್ರ ಕಳುಹಿಸಿ: ಅತೀಕ್ ಅಹ್ಮದ್

Prasthutha|

ಲಕ್ನೋ: ಉತ್ತರ ಪ್ರದೇಶ ಪೊಲೀಸರ ವಶದಲ್ಲಿ ಹತ್ಯೆಗೀಡಾದ ಮಾಜಿ ಸಂಸದ ಅತೀಕ್ ಅಹ್ಮದ್ ಬರೆದ ಪತ್ರವು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೋಗುತ್ತಿದೆ ಎಂದು ಅವರ ವಕೀಲರು ಮಂಗಳವಾರ ಬೆಳಿಗ್ಗೆ ತಿಳಿಸಿದ್ದಾರೆ.

- Advertisement -


ಮುಚ್ಚಿದ ಲಕೋಟೆಯಲ್ಲಿರುವ ಪತ್ರ ನನ್ನ ಬಳಿ ಇಲ್ಲ ಅಥವಾ ಅದನ್ನು ನಾನು ಕಳುಹಿಸಿಲ್ಲ. ಅದನ್ನು ಬೇರೆಲ್ಲೋ ಇರಿಸಲಾಗಿದೆ ಹಾಗೂ ಬೇರೊಬ್ಬರು ಕಳುಹಿಸುತ್ತಾರೆ. ಅದರಲ್ಲೇನಿದೆ ಎಂದು ಗೊತ್ತಿಲ್ಲ,” ಎಂದು ಮಿಶ್ರಾ ಹೇಳಿದ್ದಾರೆ.


“ಪತ್ರದ ವಿಷಯಗಳು ನನಗೆ ತಿಳಿದಿಲ್ಲ. ಯಾವುದೇ ದುರ್ಘಟನೆ ಸಂಭವಿಸಿದರೆ ಅಥವಾ ಕೊಲೆಯಾಗಿದ್ದರೆ, ಮುಚ್ಚಿದ ಲಕೋಟೆಯಲ್ಲಿರುವ ಪತ್ರವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಕಳುಹಿಸಬೇಕು ಎಂದು ಅತೀಕ್ ಅಹ್ಮದ್ ಹೇಳಿದ್ದರು” ಎಂದು ಅವರು ಹೇಳಿದರು.

- Advertisement -


ಅತೀಕ್ ಅಹ್ಮದ್ (60) ಮತ್ತಾತನ ಸಹೋದರ ಅಶ್ರಫ್ನನ್ನು ಶನಿವಾರ ರಾತ್ರಿ ಪ್ರಯಾಗರಾಜ್ನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರ ಸೋಗು ಧರಿಸಿದ್ದ ಹಂತಕರು ತೀರಾ ಸನಿಹದಲ್ಲಿ ಗುಂಡಿಕ್ಕಿ ಸಾಯಿಸಿದ್ದರು.

Join Whatsapp