ನನಗೆ ವ್ಯಕ್ತಿ ಉತ್ಸವ ಬೇಡ: ಸಿದ್ದರಾಮೋತ್ಸವಕ್ಕೆ ಡಿಕೆಶಿ ಪರೋಕ್ಷ ಟಾಂಗ್

Prasthutha|

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ 75 ವರ್ಷ ಪೂರ್ತಿಯಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಅಗಸ್ಟ್‌ 3ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ನನಗೆ ಯಾವ ಉತ್ಸವನೂ ಬೇಡ, ಪಕ್ಷದ ಉತ್ಸವ ಬೇಕು ಎಂದು ಹೇಳಿದ್ದಾರೆ.

- Advertisement -

ಸಿದ್ದರಾಮೋತ್ಸವ ನಿರ್ವಹಣಾ ಇರೋ ಸಮಿತಿ ಇವತ್ತು ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಭೆ ನಡೆಸಿದೆ. ಈ ವೇಳೆ, ಕಾಂಗ್ರೆಸ್‌ ಸಂಸದ ಡಿ.ಕೆ ಸುರೇಶ್‌, ಕೂಡ ಅದೇ ರೀತಿ ಮಾತಾಡಿದ್ದಾರೆ. ನಮಗೆ ಇಷ್ಟ ಇದೆಯೋ ಇಲ್ವೋ, ಇದನ್ನ ಸಿದ್ದರಾಮೋತ್ಸವ ಎನ್ನುತ್ತಿದ್ದಾರೆ. ಇದನ್ನ ಅಮೃತ ಮಹೋತ್ಸವ ಸಮಿತಿ ಅಲ್ಲಗಳೆಯಬಾರದು. ಜೊತೆಗೆ ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವವನ್ನೂ ಆಚರಿಸಬೇಕು ಅಂತ ಹೇಳಿದ್ದಾರೆ.

Join Whatsapp