ನಮ್ಮ 25 ಗೆಳೆಯರ ಬಳಗದಲ್ಲಿ ನಾನೊಬ್ಬ ಮಾತ್ರ ಹಿಂದೂ: ಹತ್ಯೆಯಾದ ಫಾಝಿಲ್ ಆಪ್ತ ಸತೀಶ್ ಹೇಳಿಕೆ ವೈರಲ್

Prasthutha|

ಮಂಗಳೂರು: ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಫಾಝಿಲ್ ಅವರ ಆಪ್ತ ಗೆಳೆಯ ಸತೀಶ್ ಎಂಬಾತನ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಸುದ್ದಿವಾಹಿನಿಗಳೊಂದಿಗೆ ಮಾತಾಡಿದ ಸತೀಶ್ ,ನಾವು 25 ಮಂದಿಯ ಬಳಗದಲ್ಲಿ ನಾನೊಬ್ಬ ಮಾತ್ರ ಹಿಂದೂ. ನಮ್ಮ ನಡುವೆ ಇದುವರೆಗೂ ಜಗಳ ಬಂದಿಲ್ಲ. ಅಷ್ಟು ಅನ್ಯೋನ್ಯತೆ ನಮ್ಮೊಳಗಿತ್ತು ಎಂದು ಹೇಳಿದ್ದಾರೆ.

ನಾನೊಬ್ಬನೇ ಹಿಂದೂ ಆಗಿದ್ದರೂ ನಮ್ಮ ಬಳಗದ ಉಳಿದ 24 ಮಂದಿಯಿಂದ ನನಗೆ ಇದುವರೆಗೂ ತೊಂದರೆಯಾಗಿಲ್ಲ. ನಾವು ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದೆವು ಎಂದು ಸ್ನೇಹಿತನ ನೆನೆದು ಕಣ್ಣೀರಿಟ್ಟಿದ್ದಾರೆ.

- Advertisement -

ಸತೀಶ್ ಅವರ ಮಾತುಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯುತ್ತಿರುವ ಹಲವು ರಾಜಕಾರಣಿಗಳಿಗೆ ಸೆಡ್ಡು ಹೊಡೆದಂತಾಗಿದೆ.



Join Whatsapp