ಯಾರಾದರೂ ಕೈ ಕೊಟ್ಟರೆ ಹುಷಾರ್: ಪಕ್ಷದ ನಾಯಕರಿಗೆ ಡಿಕೆಶಿ ವಾರ್ನಿಂಗ್

Prasthutha|

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ವಾರ್ನಿಂಗ್ ಮಾಡಿದ್ದಾರೆ.

- Advertisement -

ರಾಜ್ಯಸಭೆ ಚುನಾವಣೆ ಹಿನ್ನೆಲೆ ಸಿಎಲ್‍ಪಿ ಸಭೆ ನಡೆಸಿದ ಡಿಕೆಶಿ, ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಆಗಬಾರದು. ಒಂದೇ ಒಂದು ಮತ ಅಡ್ಡಮತದಾನವಾದರೂ ಹುಷಾರ್.. ನಾನು ಬದುಕಿರುವವರೆಗೂ ನಿಮಗೆ `ಬಿ ಫಾರಂ’ ಸಿಗದಂತೆ ನೋಡಿಕೊಳ್ಳುತ್ತೇನೆ.

ಯಾರು ಅಡ್ಡ ಮತದಾನ ಮಾಡುತ್ತಾರೋ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಾಗಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಮಾತು ತನ್ನದೇ ಪಕ್ಷದ ಶಾಸಕರ ಮೇಲೆ ಅಪನಂಬಿಕೆಯನ್ನು ಎತ್ತಿ ತೋರಿಸುತ್ತಿದ್ದು ಅಂಕಣದಲ್ಲಿ ಯಾವ ರೀತಿ ಆಟ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

- Advertisement -



Join Whatsapp