ಮದುವೆಯಾದ ಆರೇ ತಿಂಗಳಿಗೆ ಪತ್ನಿ ಮೇಲೆ ಅನುಮಾನ | ಕತ್ತು ಹಿಸುಕಿ ಕೊಂದ ಪತಿ!

Prasthutha|

ಹೈದರಾಬಾದ್: ಮದುವೆಯಾದ ಆರೇ ತಿಂಗಳಿಗೆ ಪತ್ನಿ ಮೇಲೆ ಅನುಮಾನಪಟ್ಟು, ಪತಿಯೋರ್ವ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ ಮೂಸಾಪೇಟೆಯಲ್ಲಿ ನಡೆದಿದೆ. ಸಂತೋಷ್ ಮತ್ತು ಪುಣ್ಯವತಿ ಜೋಡಿ ಆರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪತಿಯ ಅನುಮಾನದ ಕಾರಣದಿಂದ ಪುಣ್ಯವತಿ ಸಾವಿಗೀಡಾಗಿದ್ದಾಳೆ.

- Advertisement -

ಸಂತೋಷ್ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ವಾಸವಾಗಿದ್ದು, ವೆಲ್ಡಿಂಗ್ಶಾಮಪ್ನಿಲ್ಲಿ ಕೆಲಸ ಮಾಡುತ್ತಿದ್ದನು. ಪುಣ್ಯವತಿ ಜೊತೆ ದಾಂಪತ್ಯ ಜೀವನದ ನಂತರ. ಬೇರೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದನು ಎನ್ನಲಾಗಿದೆ. ಆದರೆ ಕಳೆದ ತಿಂಗಳಿನಿಂದೀಚೆಗೆ ಪುಣ್ಯವತಿ ಮೇಲೆ ಅನುಮಾನಪಡಲು ಶುರು ಮಾಡಿದ್ದ. ಕುಟುಂಬದ ಸದಸ್ಯರು ಸೇರಿದಂತೆ ಯಾರೊಂದಿಗೂ ಫೋನ್ ನಲ್ಲಿ ಮಾತನಾಡದಂತೆ ಬೆದರಿಕೆ ಒಡ್ಡಿದ್ದಾನೆ.

ಈ ಬಗ್ಗೆ ಕುಟುಂಬಸ್ಥರೊಂದಿಗೆ ಪುಣ್ಯವತಿ ನೋವಿ ತೋಡಿಕೊಂಡಿದ್ದು, ಮಾತುಕತೆಯ ಬಳಿಕ ಸಂತೋಷ್ ಹೆಂಡತಿಯೊಂದಿಗೆ ಸರಿಯಾಗಿಯೇ ವರ್ತಿಸುತ್ತಿದ್ದ ಎನ್ನಲಾಗಿದೆ. ಆದರೆ ಇದ್ದಕ್ಕಿದ್ದಂತೆ ಕಿರುಕುಳ ನೀಡಲು ಶುರು ಮಾಡಿರುವ ಸಂತೋಷ್ ನಿನ್ನೆ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಕುಕ್ಕಟ್ಪದಲ್ಲಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಆರೋಪಿ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.

Join Whatsapp