ಜೂನ್ 20ರಂದು ಕಲಬುರ್ಗಿಯಲ್ಲಿ ಉಪವಾಸ ಸತ್ಯಾಗ್ರಹ: ಬಿಲ್ಲವ ಮುಖಂಡರನ್ನು ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ

Prasthutha|

ಮಂಗಳೂರು: ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಕೇಂದ್ರ ಸಮಿತಿಯಿಂದ  ಜೂನ್ 20ರಂದು ಕಲಬುರ್ಗಿಯಲ್ಲಿ  ಆಯೋಜಿಸಲಾಗಿರುವ ಅಮರಣಾಂತರ ಉಪವಾಸ ಹೋರಾಟಕ್ಕೆ ಮುನ್ನ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣ ದೇವಸ್ಥಾನಕ್ಕೆ ಶುಕ್ರವಾರ ಪ್ರಣವಾನಂದ ಸ್ವಾಮೀಜಿ ಸಂದರ್ಶನ ಮಾಡಿ ಪ್ರಾರ್ಥನೆ ಮಾಡಿದರು.

- Advertisement -

ಬ್ರಹ್ಮ ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ  ದೇವಸ್ಥಾನವಾಗಿದೆ. ಇದಕ್ಕೂ ಮುನ್ನ ಪ್ರಣವಾನಂದ ಸ್ವಾಮೀಜಿ  ಮಂಗಳೂರಿನಲ್ಲಿ ಬಿಲ್ಲವ ಮುಖಂಡರನ್ನು ಭೇಟಿ ಮಾಡಿ ಹೋರಾಟದ ಕುರಿತಾಗಿ ಮಾತುಕತೆ ನಡೆಸಿದರು.

ಈಡಿಗ-ಬಿಲ್ಲವ ಜಾತಿಯ 26 ಪಂಗಡಗಳಿಗಾಗಿ ಪ್ರತ್ಯೇಕವಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ, ಕರಾವಳಿಯಲ್ಲಿ ಇರುವಂತೆ ಕಲ್ಯಾಣ ಕರ್ನಾಟಕದಲ್ಲಿ ಕೂಡ ನಮ್ಮ ಕಸುಬು, ನಮ್ಮ ಕಸುಬು ಆಗಿದ್ದು ಸೇಂದಿ ಇಳಿಸುವ ಹಕ್ಕು ನೀಡಬೇಕು ಎಂದು ಆಗ್ರಹಿಸಿ  ಹೋರಾಟ ಹಮ್ಮಿಕೊಳ್ಳಲಾಗಿದೆ.



Join Whatsapp