ವ್ಯಕ್ತಿ ಅಪರಾಧಿ ಎಂದು ಆದೇಶ ನೀಡುವವರೆಗೆ ಮನೆ ಧ್ವಂಸಗೊಳಿಸುವಂತಿಲ್ಲ: ಸುಪ್ರೀಂಕೋರ್ಟ್

Prasthutha|

ನವದೆಹಲಿ: ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ವಿರುದ್ಧ ಮನೆಗಳ ಮೇಲಿನ ಬುಲ್ಡೋಜರ್‌ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಸೋಮವಾರ (ಸೆ.02) ಒಂದು ವೇಳೆ ವ್ಯಕ್ತಿಯನ್ನು ಅಪರಾಧಿ ಎಂದು ಆದೇಶ ನೀಡುವ ಮೊದಲು ಮನೆಯನ್ನು ನೆಲಸಮಗೊಳಿಸಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

- Advertisement -

ಕೇವಲ ಆರೋಪಿಯಾದ ಮಾತ್ರಕ್ಕೆ ಮನೆಯನ್ನು ಹೇಗೆ ಧ್ವಂಸಗೊಳಿಸಿದಿರಿ? ಒಂದು ವೇಳೆ ಅಪರಾಧಿ ಎಂದು ಆದೇಶ ನೀಡುವವರೆಗೆ ಮನೆ ಧ್ವಂಸಗೊಳಿಸುವಂತಿಲ್ಲ.

ನಾವು ಈ ಬಗ್ಗೆ ಮೌಖಿಕವಾಗಿ ಹೇಳಿದ್ದರೂ ಕೂಡಾ, ಸರ್ಕಾರದ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಎಂದು ಜಮಿಯತ್‌ ಇ ಹಿಂದ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್‌ ಬಿಆರ್‌ ಗವಾಯಿ ಈ ರೀತಿ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

- Advertisement -

ಯಾರೂ ಕೂಡಾ ಲೋಪದೋಷದ ಲಾಭವನ್ನು ಪಡೆದುಕೊಳ್ಳಬಾರದು. ತಂದೆಯೊಬ್ಬನಿಗೆ ಅಶಿಸ್ತಿನ ಮಗನಿರಬಹುದು, ಆದರೆ ಈ ನೆಲದಲ್ಲಿ ಒಂದು ವೇಳೆ ಮನೆಯನ್ನು ಧ್ವಂಸಗೊಳಿಸುದೆಂದರೆ ಇದು ಸೂಕ್ತವಾದ ಮಾರ್ಗವಲ್ಲ ಎಂದು ಜಸ್ಟೀಸ್‌ ಕೆ.ವಿ.ವಿಶ್ವನಾಥನ್‌ ಅರ್ಜಿ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.



Join Whatsapp