ಮಂಗಳೂರು ಡಿವೈಎಸ್ ಪಿ ಪರಮೇಶ್ವರ್ ಸೇರಿ ಆರು ಮಂದಿ ಅಧಿಕಾರಿಗಳಿಗೆ ಗೃಹ ಸಚಿವರ ಪದಕ

Prasthutha|

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ತನಿಖೆಗಾಗಿ 2021ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕಕ್ಕೆ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

- Advertisement -


ಮಂಗಳೂರು ಉಪ ವಿಭಾಗದ ಡಿವೈಎಸ್ ಪಿ ಪರಮೇಶ್ವರ್ ಅನಂತ್ ಹೆಗ್ಡೆ, ಬೆಂಗಳೂರು ಸಿಸಿಬಿಯ ಎಸಿಪಿ ಎಚ್.ಎನ್. ಧರ್ಮೇಂದ್ರ, ಬೆಂಗಳೂರು ಬಿಡಿಎ ಎಸ್ ಟಿಎಫ್ ನ ಡಿವೈಎಸ್ ಪಿ ಬಾಲಕೃಷ್ಣ ಸಿ, ಬೆಂಗಳೂರು ಕೆಎಲ್ ಎ ಸಿಟ್ ನ ಪೊಲೀಸ್ ಇನ್ಸ್ ಪೆಕ್ಟರ್ ಮನೋಜ್ ಎನ್. ಹೊವಲೆ, ದಾವಣಗೆರೆ ಹೊನ್ನಾಳಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಟಿ.ವಿ., ಹುಬ್ಬಳ್ಳಿ ಹಳೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ಪ ಸೆಟ್ಟಪ್ಪ ಕಮಟಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Join Whatsapp