ಅತ್ಯಾಚಾರ ಆರೋಪಿಯ ಕುಟುಂಬದ ಜೊತೆಯಲ್ಲಿ ದೇಶದ ಗೃಹಮಂತ್ರಿ ಸಮಾಲೋಚನೆ: ಭಾಸ್ಕರ್ ಪ್ರಸಾದ್ ಕಿಡಿ

Prasthutha|

ಬೆಂಗಳೂರು: ದೇಶದ ಗೃಹಮಂತ್ರಿ ಅತ್ಯಾಚಾರದ ಆರೋಪಿಯ ಕುಟುಂಬದ ಜೊತೆಯಲ್ಲಿ ಸಮಾಧಾನ ಮತ್ತು ಸಮಾಲೋಚನೆಗೆ ಹೋಗುತ್ತಾರೆ ಎಂದಾದರೆ ಈ ರಾಜ್ಯದ ಪೋಲಿಸರ ನೈತಿಕ ಸ್ಥೈರ್ಯ ಏನಾಗಬೇಕು ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ಕಿಡಿಕಾರಿದ್ದಾರೆ.

- Advertisement -


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಒಂದು ರಾಜ್ಯದ ಪೋಲಿಸರು ಅತ್ಯಾಚಾರದ ಆರೋಪಿಯನ್ನು ಬಂಧಿಸುತ್ತಾರೆ. ದೇಶದ ಗೃಹಮಂತ್ರಿ ಅತ್ಯಾಚಾರದ ಆರೋಪಿಯ ಕುಟುಂಬದ ಜೊತೆಯಲ್ಲಿ ಸಮಾಧಾನ ಮತ್ತು ಸಮಾಲೋಚನೆಗೆ ಹೋಗುತ್ತಾರೆ. ರಾಜ್ಯದ ಪೋಲಿಸರ ನೈತಿಕ ಸ್ಥೈರ್ಯ ಏನಾಗಬೇಕು? ಜಗತ್ತಿಗೆ ಈ ದೇಶ ನೀಡುವ ಸಂದೇಶವಾದರೂ ಏನು? ಇಂತಹ ನಾಚಿಕೆಗೆಟ್ಟ ಗೃಹಮಂತ್ರಿಯನ್ನು ಈ ದೇಶ ಯಾವತ್ತಾದರೂ ನೋಡಿತ್ತಾ ಎಂದು ಹೇಳಿದ್ದಾರೆ.

Join Whatsapp