ಹಿಂಜಾವೇ ಕಾರ್ಯಕರ್ತನಿಂದ ಬರ್ಬರ ಕೊಲೆ: ಆರೋಪಿಗಳ ಬಂಧನ

Prasthutha|

ಬಾಗಲಕೋಟೆ; ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಿಂದ ಯುವಕನೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.

- Advertisement -

ಕೊಲೆಯಾದ ಯುವಕನನ್ನು ಮಹಿಬೂಬ್ ಭಗವಾನ್ (24) ಎಂದು ಗುರುತಿಸಲಾಗಿದೆ. ಭದ್ರೇಶ್ ಮೋಹಿತ್ ಎಂಬ ಒಬ್ಬ ಹಿಂಜಾವೇ ಸದಸ್ಯ ಹಾಗೂ ಇತರರು ಸೇರಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜಾಗರಣ ವೇದಿಕೆಯ ಸದಸ್ಯನಾಗಿದ್ದ ಎಂದು ಸ್ಥಳೀಯರು ಖಚಿತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು ಕೊಲೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

Join Whatsapp