ಸರ್ಕಾರಕ್ಕಿಂತಲೂ ಹಿಂದುತ್ವವೇ ಪ್ರಧಾನ: ಸಚಿವ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ

Prasthutha|

ಉಡುಪಿ: ಸರ್ಕಾರ ಅಥವಾ ಹಿಂದುತ್ವವನ್ನು ಆಯ್ಕೆಗೊಳಿಸುವ ಪ್ರಶ್ನೆ ಉದ್ಭವಿಸಿದಾಗ ಸರ್ಕಾರವನ್ನು ತೊರೆದು ಹಿಂದುತ್ವವನ್ನೇ ಆಯ್ಕೆ ಮಾಡುತ್ತೇವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂಪ್ರಸಾದ್ ಮುಖರ್ಜಿ ಅವರು ಅಧಿಕಾರವನ್ನು ತೊರೆದುಕೊಂಡೇ ಜನಸಂಘ ಮತ್ತು ಬಿಜೆಪಿಯನ್ನು ಪ್ರಾರಂಭಿಸಿದರು. ಅಲ್ಲದೆ, ರಾಜ್ಯದಲ್ಲೂ ಹಿಂದುತ್ವದ ಆಧಾರದಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದೇವೆ. ಹಿಂದುತ್ವಕ್ಕಾಗಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.

ಸದ್ಯ ನಾವು ಎದುರಿಸಿದ ಸಣ್ಣ ಮಟ್ಟದ ಪ್ರತಿರೋಧ, ಆಕ್ರೋಶಕ್ಕೆ ರಾಷ್ಟ್ರೀಯತೆಯನ್ನು ತೊರೆಯುವುದಿಲ್ಲ. ರಾಷ್ಟ್ರೀಯತೆಯ ವಿಚಾರದಲ್ಲಿ ಮತ್ತಷ್ಟೂ ಮುಂದುವರಿಯಲಿದ್ದೇವೆ ಎಂದೂ ಅವರು ತಿಳಿಸಿದರು.

Join Whatsapp