ಜಿಲ್ಲಾಡಳಿತ ಆಯೋಚಿಸಿದ್ದ ಕಾರ್ಯಕ್ರಮದಲ್ಲಿ ಹಿಂದುತ್ವದ ಘೋಷಣೆ: ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ ಜಿಲ್ಲಾಧಿಕಾರಿ

Prasthutha|

ವಿಜಯನಗರ: ನೂತನ ಜಿಲ್ಲಾ ಉದ್ಘಾಟನೆಯ ಸಮಾರಂಭದಲ್ಲಿ, ವೇದಿಕೆಯಲ್ಲಿ ಹಾಡು ಹಾಡುತ್ತಿದ್ದ ಗಾಯಕಿ ಹಿಂದುತ್ವದ ಪರವಾಗಿ ಘೋಷಣೆ ಕೂಗಿದ ಕಾರಣಕ್ಕೆ, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅರ್ಧದಲ್ಲೇ ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ.

- Advertisement -


ಹಾಡಲು ಶುರು ಮಾಡಿದ ಗಾಯಕಿ ಲಕ್ಷ್ಮಿ ಹಾಡಿನ ಮಧ್ಯೆ, ಗೋ ಹತ್ಯೆಯನ್ನು ನಿಲ್ಲಿಸಿ, ಇದು ಪ್ರತಿ ಹಿಂದೂಗಳ ಮಾತೆ. ಹಿಂದೂಸ್ಥಾನದಲ್ಲಿ ಇರಬೇಕೆಂದರೆ ವಂದೇ ಮಾತರಂ ಹೇಳಬೇಕು ಎಂದು ಹೇಳಿದ್ದಲ್ಲದೆ, ಬಹಳ ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.


ಶ್ರೀರಾಮನ ಮಂದಿರ ನಿರ್ಮಾಣದ ಬಗ್ಗೆ ಜನ ಹಲವು ವರ್ಷಗಳಿಂದ ಕನಸು ಕಾಣುತ್ತಿದ್ದರು. ಅದನ್ನು ಪ್ರಧಾನಿ ಮೋದಿಯವರು ಸಾಧ್ಯವಾಗಿಸಿದ್ದಾರೆ. ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದಾರೆ. ಮೋದಿಯವರಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರ ಮಾಡುವೆ. ಭಾರತದಲ್ಲಿ ಇರುವ ಶತ್ರುಗಳನ್ನು ಒದ್ದೋಡಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ಈ ವೇಳೆ ಬಹಳ ಸಿಟ್ಟಾದ ಜಿಲ್ಲಾಧಿಕಾರಿ ಅನಿರುದ್ಧ್ ಪಿ. ಶ್ರವಣ್ ಅವರು ಅವರ ಕಾರ್ಯಕ್ರಮ ನಿಲ್ಲಿಸಲು ಆದೇಶ ನೀಡಿದ್ದಾರೆ.

- Advertisement -

Join Whatsapp