ಹಿಂದು-ಮುಸ್ಲಿಮ್ ವಿದ್ಯಾರ್ಥಿನಿಯರು ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಪಡೆಯಿರಿ: ಶೋಭಾ ಕರಂದ್ಲಾಜೆ

Prasthutha|

ಉಡುಪಿ: ಹಿಂದು, ಮುಸ್ಲಿಮ್ ವಿದ್ಯಾರ್ಥಿನಿಯರು ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಪಡೆಯಿರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಧರ್ಮ ಇಲ್ಲ. ದಯವಿಟ್ಟು ಕಾಲೇಜಿನ ಕಡೆ ಬನ್ನಿ ಎಂದು ಮನವಿ ಮಾಡಿದ್ದಾರೆ.

ಹಿಜಾಬ್ ವಿವಾದ ಹಿಂದೆ ಯಾವುದೋ ಸಂಘಟನೆಯ ಪಿತೂರಿ ಇದೆ. ಇದನ್ನು ಹೈಕೋರ್ಟ್ ಕೂಡ ಹೇಳಿಕೊಂಡಿದೆ. ಶ್ರೀಮಂತ ಹುಡುಗಿಯರು ಹಿಜಾಬ್ ಇಲ್ಲದೆ ಹೊರ ಹೋಗುತ್ತಾರೆ. ಆದರೆ ಬಡ ವಿದ್ಯಾರ್ಥಿನಿಯರಿಗೆ ಹಾಕಿಸಿ ಕಳುಹಿಸುವ ಹುನ್ನಾರ ಇದೆ ಎಂದು ಹೇಳಿದ್ದಾರೆ.

- Advertisement -

ಮುಸ್ಲಿಮರ ಹೆಣ್ಣು ಮಕ್ಕಳು ಕೂಡ ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಆದ್ಯತೆ ಎಂದು ಹೇಳಿದರು. ಯಾರ ಷಡ್ಯಂತ್ರಕ್ಕೆ ಬಲಿಯಾಗಬೇಡಿ ಎಂದು ಹೇಳಿದರು.



Join Whatsapp