ಶಿವಾಜಿಯಿಂದ ಹಿಂದೂ ಸಾಮ್ರಾಜ್ಯ ಗಟ್ಟಿಯಾಗಿ ಉಳಿದಿದೆ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಮರಾಠ ರಾಜ ಛತ್ರಪತಿ ಶಿವಾಜಿಯ 395ನೇ ಜಯಂತಿ ಹಿನ್ನೆಲೆ ಸದಾಶಿವನಗರದ ಭಾಷಂ ಸರ್ಕಲ್ ನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು.

- Advertisement -

ಶಿವಾಜಿಯ ದಿಟ್ಟತನದಿಂದ ಹಿಂದೂ ಸಾಮ್ರಾಜ್ಯ ಗಟ್ಟಿತನವಾಗಿ ಉಳಿದಿದೆ. ಶಿವಾಜಿ ಮಹಾರಾಜರು ಇಡೀ ದೇಶಕ್ಕೆ ಸೇರಿದಂತವರು. ಶಿವಾಜಿ ಮಹರಾಜರ ಹೆಸರಲ್ಲಿ ಶಕ್ತಿ ಸ್ಪೂರ್ತಿ ಇದೆ. ಅವರ ತತ್ವ ಆದರ್ಶಗಳನ್ನು ರಾಜ್ಯದಲ್ಲೂ ತರುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ಶಿವಾಜಿ ಜಯಂತಿಯಂದು ಮರಾಠಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕವಾಗಲಿದ್ದು, ನಿಗಮಕ್ಕೆ ಇಂದು ಅಧ್ಯಕ್ಷರ ನೇಮಿಸಿ ಸರ್ಕಾರದಿಂದ ಆದೇಶ ಪ್ರಕಟಿಸಲಾಗುತ್ತದೆ. ಮಾರುತಿರಾವ್ ಮುಳೆ ಅವರನ್ನು ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಲು ನಿರ್ಧರಿಸಲಾಗಿದೆ. ಬಜೆಟ್ ನಲ್ಲಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.



Join Whatsapp