ಹೈಕೋರ್ಟ್ ನಲ್ಲಿ ಹಿಜಾಬ್ ವಿಚಾರಣೆ : ಇಂದಿನ ವಾದ ಪ್ರತಿವಾದ ಹೀಗಿದೆ…

Prasthutha|

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ಪೂರ್ಣ ಪೀಠವು ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ಕೂಡ ಮುಂದುವರಿಸಿದೆ.

- Advertisement -

ವಕೀಲ ಕಲೀಶ್ವರಂ ರಾಜ್‌: ಗೊಂದಲಗಳನ್ನು ನಿಯಂತ್ರಿಸಲು ಪ್ರತಿ ವಕೀಲರಿಗೆ ನಿರ್ದಿಷ್ಟ ಸಮಯ ನಿಗದಿಪಡಿಸುವುದು ಉತ್ತಮ.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ.

- Advertisement -

ಸಿಜೆ ಅವಸ್ಥಿ: ಮಧ್ಯಪ್ರವೇಶ ಮನವಿಗಳನ್ನು ಆಲಿಸುವುದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ.

ವಕೀಲ ಶಾದನ್‌ ಫರಾಸತ್‌: ಸಮಯ ನಿಗದಿಪಡಿಸಿ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ, ನಮ್ಮೆಲ್ಲರನ್ನೂ ಆಲಿಸಿ. ನಮ್ಮನ್ನು ವಾದದಿಂದ ಹೊರಗಿಡಬೇಡಿ.

ವಕೀಲ ರವಿಮರ್ಮ ಕುಮಾರ್ : ಕರ್ನಾಟಕ ಶಿಕ್ಷಣ ನಿಯಮಗಳು 1995ರಲ್ಲಿನ ನಿಯಮ 11 ಅನ್ನು ನೋಡಿ.
ಈ ನಿಯಮದ ಪ್ರಕಾರ ಶಿಕ್ಷಣ ಸಂಸ್ಥೆ ಸಮವಸ್ತ್ರ ಬದಲಿಸಬೇಕಾದರೆ ಆ ಸಂಸ್ಥೆಯು ಒಂದು ವರ್ಷ ಮುಂಚಿತವಾಗಿ ನೋಟಿಸ್‌ ನೀಡಬೇಕು.
ಕರ್ನಾಟಕ ಶಿಕ್ಷಣ ಕಾಯಿದೆ ಅಡಿ ಇನ್ನೊಂದು ರೂಪದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.
ಪರಿಶೀಲನಾ ಸಮಿತಿಯ ನಿಯಮಗಳ ಉಲ್ಲೇಖ. ಆದರೆ, ಈ ನಿಯಮಗಳ ಅಡಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ ಮಾನ್ಯತೆ ಇಲ್ಲ. ಆಕ್ಷೇಪಾರ್ಹ ಸಂಸ್ಥೆಯನ್ನು ನಿರ್ವಹಿಸುವ ಸರ್ಕಾರಿ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪದವಿ ಪೂರ್ವ ಸರ್ಕಾರಿ ಕಾಲೇಜುಗಳಿಗೆ ಸಮವಸ್ತ್ರ ಸೂಚಿಸುವುದು ಕಾನೂನುಬಾಹಿರವಾಗಿದೆ.

ಸಿಜೆ ಅವಸ್ಥಿ: ಈ ಮಾರ್ಗಸೂಚಿಯನ್ನು ಯಾವ ಅಧಿಕಾರದಿಂದ ಹೊರಡಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ.

ವಕೀಲ ರವಿಮರ್ಮ ಕುಮಾರ್ : ಇದನ್ನು ಸರ್ಕಾರದ ಇಲಾಖೆ ಹೊರಡಿಸಿದೆ.

ಸಿಜೆ ಅವಸ್ಥಿ: ಇದು ನಿಯಮವಲ್ಲ.

ವಕೀಲ ರವಿಮರ್ಮ ಕುಮಾರ್ : ಇದು ನಿಯಮವಲ್ಲ ಎಂಬುದಕ್ಕೆ ನನ್ನ ಸಹಮತವಿದೆ. ಆದರೆ, ಸಮವಸ್ತ್ರ ನಿಗದಿ ಮಾಡಿಲ್ಲ ಎಂಬುದು ವಾಸ್ತವಿಕ ಹೇಳಿಕೆ.

ನ್ಯಾ. ದೀಕ್ಷಿತ್‌: ನೀವು ಇದನ್ನು ಆಧರಿಸಿ ವಾದಿಸುತ್ತಿದ್ದೀರಿ. ಇದನ್ನು ನೀವು ಆಧರಿಸುವುದಾದರೆ ಅದರ ಕಾನೂನು ಸ್ಥಿತಿಗತಿ ತಿಳಿಯಲು ನಾವು ಬಯಸುತ್ತೇವೆ.

ವಕೀಲ ರವಿಮರ್ಮ ಕುಮಾರ್ : ಈ ದಾಖಲೆಯಲ್ಲಿ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಶೈಕ್ಷಣಿಕ ವರ್ಷ, ಪ್ರತಿ ಕೋರ್ಸ್‌ಗೆ ಪ್ರವೇಶಾತಿ, ಹೇಗೆ ಪ್ರವೇಶಾತಿ ನೀಡಬೇಕು ಎಂಬುದು ಇದೆ.
ಯಾವುದೇ ಪ್ರಾಂಶುಪಾಲರು ಸಮವಸ್ತ್ರ ಅನುಮೋದಿಸಬಾರದು ಮತ್ತು ಪ್ರಾಂಶುಪಾಲರು ಸಮವಸ್ತ್ರವನ್ನು ಒತ್ತಾಯಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸ್ವತಃ ಇಲಾಖೆಯು ಖಡಾಖಂಡಿತವಾಗಿ ಹೇಳಿದೆ ಎಂಬುದನ್ನು ತೋರಿಸಲು ನಾನು ಈ ದಾಖಲೆಯನ್ನು ಇರಿಸುತ್ತಿದ್ದೇನೆ.

ವಕೀಲ ರವಿಮರ್ಮ ಕುಮಾರ್ : ಈಗ ಹಿಜಾಬ್‌ ಧರಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮವಹಿಸಲಾಗುತ್ತಿದೆ.

ಕಾಯಿದೆಯ ನಿಬಂಧನೆ ಅಥವಾ ಯಾವುದೇ ನಿಯಮದ ಅಡಿ ಯಾವುದೇ ಸಮವಸ್ತ್ರ ಉಲ್ಲೇಖಿಸಿಲ್ಲ. ಕಾಯಿದೆ ಅಥವಾ ನಿಯಮಗಳ ಅಡಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿಲ್ಲ.

ನ್ಯಾ. ದೀಕ್ಷಿತ್‌: ನಾನು ಅದನ್ನು ತಾರ್ಕಿಕವಾಗಿ ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗೆಂದು ಯಾವುದೇ ನಿಷೇಧವಿಲ್ಲ. ತಾರ್ಕಿಕವಾಗಿ ಅದನ್ನು ವಿಶ್ಲೇಷಿಸಿದರೆ – ಕೃಪಾನ್ ಒಯ್ಯಲು ಅಥವಾ ಆಕ್ಷೇಪಾರ್ಹವಾದ ಯಾವುದಕ್ಕೂ ಯಾವುದೇ ನಿಷೇಧವಿಲ್ಲ.

ಏಕೆಂದರೆ, ಇವುಗಳು ಕಾಯಿದೆಯ ಬಗ್ಗೆ ಮಾತನಾಡುವುದಿಲ್ಲ ಎಂದರೆ ಅದನ್ನು ಅನುಮತಿಸಬಹುದು ಎಂದರ್ಥವಲ್ಲ. ಹಿಜಾಬ್ ಅನ್ನು ಅನುಮತಿಸಬೇಕು ಅಥವಾ ಅನುಮತಿಸಬಾರದು ಎಂದು ಅದು ಹೇಳುವುದಿಲ್ಲ ನಿಜ. ಆದರೆ, ಅದನ್ನು ಸ್ವತಂತ್ರವಾಗಿ ವಾದಿಸಬೇಕು.

ವಕೀಲ ರವಿಮರ್ಮ ಕುಮಾರ್ : ಹಿಜಾಬ್‌ ನಿಷೇಧಿಸಿಲ್ಲ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಹೀಗಾಗಿ, ಕಾನೂನಿನ ಯಾವ ನಿಯಮದಡಿ ನನ್ನನ್ನು ತರಗತಿಯಿಂದ ಹೊರಗಿಡಲಾಗಿದೆ? ಯಾವ ನಿಯಮದಡಿ? ಇದಕ್ಕೆ ಅನುಮತಿಸಿದವರು ಯಾರು?

ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಜಾಬ್‌ ಉಲ್ಲೇಖಿಸಿರುವ ಸರ್ಕಾರದ ಭಾಗಶಃ ಆದೇಶದ ಉಲ್ಲೇಖ. ಅಂತಿಮ ಆದೇಶದ ಪ್ರಕಾರ ಸರ್ಕಾರವು ಕಾಲೇಜು ಅಭಿವೃದ್ಧಿ ಸಮಿತಿಗೆ ಸಮವಸ್ತ್ರ ಸೂಚಿಸುವ ಅಧಿಕಾರ ನೀಡಿದೆ.

ವಕೀಲ ರವಿವರ್ಮ ಕುಮಾರ್ : ಸೆಕ್ಷನ್ 143 ರ ಪ್ರಕಾರ ನಿಯೋಗವು “ಅಂತಹ ಅಧಿಕಾರಿ ಅಥವಾ ರಾಜ್ಯ ಸರ್ಕಾರಕ್ಕೆ ಅಧೀನವಾಗಿರುವ ಪ್ರಾಧಿಕಾರ” ದಲ್ಲಿ ಇರಬೇಕು. ಕಾಲೇಜು ಅಭಿವೃದ್ಧಿ ಸಮಿತಿ ಆ ಪ್ರಾಧಿಕಾರವಲ್ಲ.
ವಿದ್ಯಾರ್ಥಿಗಳ ಕಲ್ಯಾಣ ಅಥವಾ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ರಚಿಸಲಾಗಿಲ್ಲ. ಇದು ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಸೀಮಿತ.

ಸಿಜೆ ಅವಸ್ಥಿ: ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಕಾಲೇಜುಗಳು ಸಮವಸ್ತ್ರ ಸೂಚಿಸಬಾರದೇ? ಏಕರೂಪತೆ, ಶಿಸ್ತು, ಸಮವಸ್ತ್ರವನ್ನು ಕಾಪಾಡಿಕೊಳ್ಳಲು ಏಕೆ ಸಾಧ್ಯವಿಲ್ಲ? ಇದು ಶೈಕ್ಷಣಿಕ ಮಾನದಂಡಗಳ ಭಾಗವಾಗಿರಬಹುದು.

ವಕೀಲ ರವಿವರ್ಮ ಕುಮಾರ್ : ಇದು ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಶಿಕ್ಷಕರು-ವಿದ್ಯಾರ್ಥಿಗಳ ಅನುಪಾತ, ಪಠ್ಯಕ್ರಮ, ತರಗತಿ ನಡೆಸುವ ವಿಧಾನ ಇತ್ಯಾದಿ ನಿರ್ಧರಿಸುತ್ತದೆ.
ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಅಧಿಕಾರ ಶಕ್ತಿಯನ್ನು ವಿಧಿಸುವುದನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಊಹಿಸುವುದಕ್ಕೆ ಸಾಧ್ಯವಿಲ್ಲ.

ಸಿಜೆ ಅವಸ್ಥಿ: ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅತ್ಯಗತ್ಯವಾದ ಶಿಸ್ತು ಮತ್ತು ಏಕರೂಪತೆಯನ್ನು ಕಾಪಾಡಿಕೊಳ್ಳುವುದು ಎಂದು ಏಕೆ ಅರ್ಥೈಸಲಾಗುವುದಿಲ್ಲ.

ವಕೀಲ ರವಿವರ್ಮ ಕುಮಾರ್ : ದನ್ನು ಈಗಾಗಲೇ ಒಳಗೊಳ್ಳಲಾಗಿದೆ. ಸೆಕ್ಷನ್‌ ೭ರಲ್ಲಿ ಅದಕ್ಕೆ ಅವಕಾಶವಿದೆ.

ನ್ಯಾ. ದೀಕ್ಷಿತ್‌: ಈ ಪೊಲೀಸ್‌ ಅಧಿಕಾರ ಎಂದರೇನು. ಪೊಲೀಸ್‌ ಸೇನೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎಂದರೆ ಅರ್ಥವಾಗುತ್ತದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎನ್ನಲಾಗದು. ನೀವು ಹೇಳುತ್ತಿರುವುದಕ್ಕೆ ನ್ಯಾಯಾಂಗದ ಅಭಿಪ್ರಾಯವೂ ವಿರುದ್ಧವಾಗಿದೆ.
ಒಂದೇ ಒಂದು ನಿರ್ಧಾರ ವಿರುದ್ಧವಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ತಪ್ಪು ಎಂದು ನಾನು ಒಪ್ಪಿಕೊಳ್ಳುವೆ.

ವಕೀಲ ರವಿವರ್ಮ ಕುಮಾರ್ : ನಾನು ಹೇಳುತ್ತಿರುವುದು ಸಮವಸ್ತ್ರವನ್ನು ಸೂಚಿಸುವ ಅಧಿಕಾರವನ್ನು ಜಿಒ ನೀಡುವುದಿಲ್ಲ.
ಸಿಜೆ ಅವಸ್ಥಿ: ಸಮವಸ್ತ್ರ ಸೂಚಿಸುವ ಅಧಿಕಾರ ಸಿಡಿಸಿಗೆ ಇಲ್ಲ ಎಂದು ನೀವು ಹೇಳುತ್ತಿದ್ದೀರಾ?

ವಕೀಲ ರವಿವರ್ಮ ಕುಮಾರ್ : ಹೌದು. ಇದಕ್ಕೆ ಸೆಕ್ಷನ್‌ ೧೪೩ರಲ್ಲಿ ಯಾವುದೇ ಅಧಿಕಾರ ನೀಡಲಾಗಿಲ್ಲ. ಕಾಯಿದೆ ಅಡಿ ಸಿಡಿಸಿ ಪ್ರಾಧಿಕಾರವಲ್ಲ. ಶಾಸಕರೊಬ್ಬರನ್ನು ಸರ್ಕಾರಕ್ಕೆ ‘ಅಧೀನ’ ಎಂದು ಕರೆಯಬಹುದೇ?
ನಮ್ಮ ಸಂವಿಧಾನದ ಅಡಿ ಜನಪ್ರತಿನಿಧಿಗಳು, ಶಾಸಕರು ಮತ್ತು ಸಂಸದರು ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಗುರುತುಪಡಿಸುತ್ತಾರೆ. ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಒಳಪಡಿಸುವುದು ಭಾರತ ಸಂವಿಧಾನದ ಉತ್ಕೃಷ್ಟತೆ.
ಆಡಳಿತವನ್ನು ಶಾಸಕರು ಹೇಗೆ ತಮ್ಮ ಕೈಗೆ ಪಡೆಯಬಹುದು? ಅಧಿಕಾರಗಳ ಪ್ರತ್ಯೇಕತೆ ಸಿದ್ಧಾಂತವು ಅಧಿಕಾರಗಳ ಮಿಶ್ರಣವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಶಾಸಕ ಅಥವಾ ಸಂಸದರಿಗೆ ಶಾಸನದ ಅಡಿಯಲ್ಲಿ ಅಥವಾ ಸಂವಿಧಾನದ 162 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ವಹಿಸಲಾಗುವುದಿಲ್ಲ.
ಶಾಸಕರಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ಆತ್ಮಹತ್ಯೆಕಾರಿ ನಿರ್ಧಾರ. ಒಬ್ಬ ಶಾಸಕ, ಅವರು ಯಾರೇ ಆಗಿರಲಿ, ಅವರು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ?
ಹೀಗಾಗಿ, ಇಂಥ ಸಮಿತಿಯನ್ನು ರಚಿಸುವುದು ಭಾರತದ ಸಂವಿಧಾನ ಮತ್ತು ಅಧಿಕಾರ ಪ್ರತ್ಯೇಕತಾ ಸಿದ್ಧಾಂತಕ್ಕೆ ಸಾವಿನ ಮೊಳೆ ಹೊಡೆದಂತೆ.
ದಕ್ಷಿಣ ಭಾರತದಲ್ಲಿ ನಮಗೆ ಧಾರ್ಮಿಕ ಸಂಕೇತಗಳ ಬಗ್ಗೆ ಹೆಚ್ಚು ಒಲವು. ಯಾವುದೇ ಸ್ಥಳಕ್ಕೆ ಹೋದರೂ ವಿಶೇಷವಾಗಿ ಸಾರ್ವಜನಿಕ ಸ್ಥಳಗಳಿಗೆ ಹೋದಾಗ, ನಮ್ಮ ಶಿಕ್ಷಕರೂ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ಉಡುಪು ಹಾಕುತ್ತಾರೆ.
ಪ್ರಕರಣ ಒಂದರ ಉಲ್ಲೇಖ. ದೇವಸ್ಥಾನವೊಂದರಲ್ಲಿ ಆನೆ ಇತ್ತು. ಆ ಆನೆಯ ಹಣೆಯಲ್ಲಿ ಯಾವ ಧಾರ್ಮಿಕ ಚಿಹ್ನೆ ಇರಬೇಕು ಎಂಬ ಪ್ರಶ್ನೆ ಎದ್ದಿತು. ಸದರಿ ವಿಚಾರವು ಸಮಾಲೋಚನಾ ಸಭೆಯಲ್ಲಿ ನಿರ್ಧಾರವಾಗುವ ವೇಳೆಗೆ ಆನೆ ಸಾವನ್ನಪ್ಪಿತ್ತು.

ನ್ಯಾ. ದೀಕ್ಷಿತ್‌: ಈ ಪ್ರಕರಣದಲ್ಲಿ ಅದಾಗಬಾರದು.

ವಕೀಲ ರವಿವರ್ಮ ಕುಮಾರ್ : ಇಲ್ಲಿ ಆ ರೀತಿ ಆಗಬಾರದು ಎಂದು ನಾನು ವಿನಯಪೂರ್ವಕವಾಗಿ ಕೇಳುತ್ತೇನೆ. ಈ ವಿಷಯವಾಗಿ ಸುಮಾರು 250 ವರ್ಷಗಳ ಕಾಲ ಕಾನೂನು ಹೋರಾಟ ಕಂಡಿತು. ಕೊನೆಯ ಹಂತದಲ್ಲಿ ಖ್ಯಾತ ಪರಾಸರನ್‌ ಅವರು ಇದರಲ್ಲಿ ವಾದಿಸಿದ್ದರೆನ್ನುವ ನೆನಪು.

ವಕೀಲ ರವಿವರ್ಮ ಕುಮಾರ್‌ ಅವರಿಂದ ಸಂಶೋಧನಾ ಪ್ರಬಂಧದ ಉಲ್ಲೇಖ. ಇದರಲ್ಲಿ ಬಹುತೇಕ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಶೇ. ೮೯ರಷ್ಟು ಮುಸ್ಲಿಮ್‌, ಶೇ. ೮೬ರಷ್ಟು ಸಿಖ್‌ ಮತ್ತು ಶೇ. ೫೯ರಷ್ಟು ಹಿಂದೂ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಹೇಳಲಾಗಿದೆ.

ನ್ಯಾ. ದೀಕ್ಷಿತ್‌: ಸಂಶೋಧನಾ ಪ್ರಬಂಧದ ಅಧಿಕೃತತೆ ಕುರಿತು ಪ್ರಶ್ನೆ.

ವಕೀಲ ರವಿವರ್ಮ ಕುಮಾರ್ : ದೇಶದ ವೈವಿಧ್ಯತೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನೂರಾರು ಧಾರ್ಮಿಕ ಸಂಕೇತಗಳು ಇರುವಾಗ ಸರ್ಕಾರ ಹಿಜಾಬ್‌ ಅನ್ನೇ ಏಕೆ ಗುರಿಯಾಗಿಸಿಕೊಂಡಿದೆ?
ಸಂವಿಧಾದನ ೧೫ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ ಆಧರಿಸಿ ರಾಜ್ಯವು ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡಬಾರದು. ಈ ಪ್ರಕರಣದಲ್ಲಿ ನನ್ನ ಧರ್ಮದ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ.

ಸಿಜೆ ಅವಸ್ಥಿ: ೧೫ನೇ ವಿಧಿಯು ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಎಂದು ನೀವು ಹೇಳುತ್ತೀರಿ. ಆದರೆ ನಿಯಮವು ಎಲ್ಲರಿಗೂ ಶಿರವಸ್ತ್ರ ನಿಷೇಧಿಸುತ್ತದೆ, ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರವಲ್ಲ.

ವಕೀಲ ರವಿವರ್ಮ ಕುಮಾರ್ : ಹಿಜಾಬ್‌ ಅನ್ನು ಕೇವಲ ಮುಸ್ಲಿಮರು ಮಾತ್ರವೇ ಧರಿಸುತ್ತಾರೆ. ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ?
ಇಲ್ಲಿ ಧರ್ಮದ ಕಾರಣ ಪೂರ್ವಾಗ್ರಹ ತುಂಬಿದೆ, ಸೂಚನೆ ಇಲ್ಲ. ಕಾಯಿದೆಯ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಗಳಿಂದ ನಾವು ತರಗತಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ.
ಶಿಕ್ಷಣದ ಗುರಿ ಬಹುತ್ವವನ್ನು ಉತ್ತೇಜಿಸುವುದು, ಏಕರೂಪತೆಯನ್ನಲ್ಲ. ತರಗತಿಯು ಸಮಾಜದ ವೈವಿಧ್ಯತೆಯ ಪ್ರತಿಬಿಂಬವಾಗಬೇಕು. ಇದಕ್ಕೆ ಪೂರಕವಾಗಿ ಪುಟ್ಟಸ್ವಾಮಿ ಮತ್ತು ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖ.
ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಆಕೆಯ ಧಾರ್ಮಿಕ ಚಿಹ್ನೆ ಧರಿಸಿರುವ ವ್ಯಕ್ತಿಗೆ ತರಗತಿಗಳಿಗೆ ಹಾಜರಾಗಲು ಏಕೆ ಅವಕಾಶ ನೀಡಬಾರದು? ಇದು ಕಠಿಣ ಕ್ರಮವಾಗಿದೆ.
ಮುಸ್ಲಿಂ ಹುಡುಗಿಯರು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬಹುದು. ಈ ಆಧಾರದ ಮೇಲೆ ಅವರನ್ನು ತರಗತಿಯಿಂದ ಹೊರಗೆ ಹಾಕಿದರೆ ಅವರ ಭವಿಷ್ಯಕ್ಕೆ ಕತ್ತಲು ಕವಿಯಲಿದೆ ಎಂದು ವಾದ ಪೂರ್ಣ.
ವಕೀಲ ಯೂಸೂಫ್‌ ಮುಚ್ಚಾಲ : ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶಿಸಲು ಫೆಬ್ರವರಿ ೩ರಿಂದ ನಿರ್ಬಂಧ ವಿಧಿಸಲಾಗಿದೆ.
25ನೇ ವಿಧಿ ಅಡಿ ಆತ್ಮಸಾಕ್ಷಿಯು ಬಹಳ ವಿಶಾಲವಾದ ಪದವಾಗಿದೆ. ದೇವರನ್ನು ನಂಬದ ಜನರು ಇನ್ನೂ ಆತ್ಮಸಾಕ್ಷಿಯಲ್ಲಿ ತಮ್ಮ ನಂಬಿಕೆಗೆ ಅರ್ಹರಾಗಿರುತ್ತಾರೆ. ಧರ್ಮಗಳ ಸಾರ್ವತ್ರಿಕತೆಯನ್ನು ನಂಬುವ ಜನರು ಇರಬಹುದು. ಅವರು ರಕ್ಷಣೆಗಾಗಿ ನ್ಯಾಯಾಲಯದ ಮುಂದೆ ಬಂದರೆ, ಅಗತ್ಯ ಧಾರ್ಮಿಕ ಆಚರಣೆಗೆ ಹೋಗಬೇಕಾಗಿಲ್ಲ.

ವಕೀಲ ಯೂಸೂಫ್‌ ಮುಚ್ಚಾಲ ಅವರಿಂದ ಶಬರಿಮಲೆ ತೀರ್ಪು, ಶಾಹೀರಾ ಬಾನು ಪ್ರಕರಣದ ಉಲ್ಲೇಖ.

ವಕೀಲ ಯೂಸೂಫ್‌ ಮುಚ್ಚಾಲ : ಮುಸ್ಲಿಂ ಮಹಿಳೆಯರನ್ನೇ ಏಕೆ ಈ ಬಗೆಯ ಹಾಬ್ಸನ್‌ ಆಯ್ಕೆಗೆ ದೂಡಬೇಕು? ಶಿಕ್ಷಣವನ್ನು ಪಡೆಯಬೇಕು, ಇಲ್ಲವೇ ಆತ್ಮಸಾಕ್ಷಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಪರಿಸ್ಥಿತಿಗೆ ಏಕೆ ದೂಡಬೇಕು?
ಅರ್ಜಿದಾರರ ಮೇಲೆ ಇರಿಸಲಾದ ಈ ರೀತಿಯ ಹಾಬ್ಸನ್ ಆಯ್ಕೆಯನ್ನು ನಿರ್ಲಕ್ಷಿಸಬೇಕು.
ಸಂವಿಧಾನದ ೫೧ಎ ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನು ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಬೇಕು.
ಏಕರೂಪತೆ ಮತ್ತು ಶಿಸ್ತು ಹೊಂದುವ ಉದ್ದೇಶವಿದೆ ಎಂದು ಬಯಸಿದ್ದಾರೆ ಎಂದು ಇಟ್ಟುಕೊಂಡರೂ ಸಂಬಂಧಪಟ್ಟವರು ಮತ್ತು ತಮ್ಮ ಹಕ್ಕುಗಳಿಗೆ ಧಕ್ಕೆಯಾಗಿರುವವರನ್ನು ಏಕೆ ಸಂಪರ್ಕಿಸಬಾರದು.
ಮಧ್ಯಂತರ ಮನವಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಇದು ಮಧ್ಯಂತರ ಆದೇಶದ ಮೇಲಿನ ವಾದವೋ ಅಥವಾ ಅಂತಿಮ ವಿಚಾರಣೆಯೋ?

ಸಿಜೆ ಅವಸ್ಥಿ: ನೀವು ವಾದ ಆರಂಭಿಸಿದಿರಿ ನಾವು ಕೇಳಿದ್ದೇವೆ. ನೀವು ಅಂತಿಮ ವಾದ ಮಂಡಿಸಿದ್ದಾರೆಯೋ ಅಥವಾ ಮಧ್ಯಂತರ ವಾದವೋ ನಮಗೆ ಗೊತ್ತಿಲ್ಲ.
ಮಧ್ಯಂತರ ಪರಿಹಾರ ಕೋರಿದ್ದ ಯಾವುದೇ ಮನವಿಯನ್ನು ನಾವು ವಿಲೇವಾರಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ.

ಮಧ್ಯಂತರ ಆದೇಶದಲ್ಲಿ ಸ್ಪಷ್ಟತೆ ಕೇಳಿದ ಪ್ರೊ. ರವಿವರ್ಮ ಕುಮಾರ್‌. ಇದಕ್ಕೆ ಸಂಬಂಧಿಸಿದ ಮನವಿಯನ್ನು ಕೆಲವು ತಾಂತ್ರಿಕ ಕಾರಣಗಾಗಿ ನಿನ್ನೆ ಆಲಿಸಿಲ್ಲ.
ಹೆಚ್ಚುವರಿ ಶಿರವಸ್ತ್ರಕ್ಕೆ ಬದಲಾಗಿ, ಒಂದೇ ಬಣ್ಣದ ದುಪ್ಪಟ್ಟಾ ಹಾಕಲು ವಿದ್ಯಾರ್ಥಿಗಳಿಗೆ ಅನುಮತಿಸಬೇಕು ಎಂಬುದನ್ನು ಮನವಿಯಲ್ಲಿ ವಿವರಿಸಲಾಗಿದೆ.

ಸದರಿ ಮನವಿಗೆ ಆಕ್ಷೇಪಣೆ ಸಲ್ಲಿಸಲು ಎರಡು ದಿನ ಕಾಲಾವಕಾಶ ಕೋರಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ. ಅದಕ್ಕೆ ಅನುಮತಿಸಿದ ಪೀಠ.

ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ.

Join Whatsapp