ಹಿಜಾಬ್ ಪ್ರಕರಣ: ಹೆಣ್ಣು ಮಕ್ಕಳಿಗೆ ಬುದ್ದಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ: ಕೆ.ಎಸ್ ಈಶ್ವರಪ್ಪ

Prasthutha|

ಬೆಂಗಳೂರು: ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ, ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ

- Advertisement -

ಹಿಜಾಬ್ ತೀರ್ಪು CJI ಕೋರ್ಟ್ ಗೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ, ಇಸ್ಲಾಂ ಧರ್ಮದಲ್ಲಿ, ಕುರ್ ಆನ್ ನಲ್ಲಿ ಹಿಜಾಬ್ ಕಡ್ಡಾಯವಿಲ್ಲ. ಮುಸ್ಲಿಂ ಮುಖಂಡರು ಮಕ್ಕಳಿಗೆ ಬೈದು ಬುದ್ದಿ ಹೇಳ್ಬೇಕಿತ್ತು, ಹೆಣ್ಣು ಮಕ್ಕಳಿಗೆ ಬುದ್ದಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ, ಬೆಂಕಿ ಹಚ್ಚೋ ಕೆಲಸ ಆಗಿದ್ರಿಂದ ಪರಿಸ್ಥಿತಿ ಇಲ್ಲಿಗೆ ಬಂದಿದೆ,  CJI ಪೀಠದಿಂದ ಏನು ಆದೇಶ ಬರುತ್ತೆಂದು ಕಾದು ನೋಡ್ಬೇಕು ಎಂದು ಹೇಳಿದ್ದಾರೆ.

Join Whatsapp