ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಗ್ಗಿದ ಮಳೆ ಅಬ್ಬರ

Prasthutha|

►ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆ

- Advertisement -


ಮಂಗಳೂರು
: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಜೋರಾಗಿದ್ದ ಮಳೆ ಅಬ್ಬರ ಶನಿವಾರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯಿಂದಲೂ ಬಿಸಿಲಿನಿಂದ ಕೂಡಿದ ವಾತಾವರಣವಿದೆ. ಶುಕ್ರವಾರ ರಾತ್ರಿಯೂ ಮಳೆ ಪ್ರಮಾಣ ಕಡಿಮೆ ಇತ್ತು.


ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಫಾಲ್ಗುಣಿ, ನಂದಿನಿ ಹಾಗೂ ಶಾಂಭವಿ, ನದಿಗಳಲ್ಲೂ ನೀರು ಹರಿವಿನ ಮಟ್ಟ ತಗ್ಗಿದೆ. ಬಂಟ್ವಾಳ ಬಳಿ ಶುಕ್ರವಾರ ಅಪಾಯದ ಮಟ್ಟ ಮೀರಿ 8.6 ಮೀ. ವರೆಗೂ ತಲುಪಿದ್ದ ನೀರು ಹರಿವಿನ ಮಟ್ಟ ಶನಿವಾರ 7.4 ಮೀ.ಗೆ ಇಳಿಕೆಯಾಗಿದೆ.



Join Whatsapp