ಮರಳು ಬಿಸಿ ಮಾಡಿದರೆ ಚಿನ್ನವಾಗುತ್ತದೆ! : ಆಭರಣ ಉದ್ಯಮಿಗೆ 50 ಲಕ್ಷ ರೂ. ವಂಚನೆ

Prasthutha|

ಪುಣೆ : ಬಂಗಾಳದಿಂದ ತರಿಸಲಾದ ವಿಶೇಷ ಮರಳನ್ನು ಬಿಸಿ ಮಾಡಿದರೆ ಚಿನ್ನವಾಗುತ್ತದೆ ಎಂದ ಪರಿಚಿತನ ಮಾತನ್ನು ನಂಬಿ 4 ಕೆ.ಜಿ. ಮರಳು ಖರೀದಿಸಿದ ಆಭರಣ ವ್ಯಾಪಾರಿಯೊಬ್ಬರು ಸುಮಾರು 50 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಪುಣೆ ಮೂಲದ ಉದ್ಯಮಿ ವಂಚನೆ ಹೋಗಿರುವ ವ್ಯಕ್ತಿ.

- Advertisement -

ಆರೋಪಿ ವ್ಯಕ್ತಿಯು ತಮ್ಮ ಅಂಗಡಿಗೆ ವರ್ಷದ ಹಿಂದೆ ಬಂದಿದ್ದ, ಬಳಿಕ ಪರಿಚಯ ಮಾಡಿಕೊಂಡು ಆತ್ಮೀಯನಾಗಿದ್ದ. ಉದ್ಯಮಿಯ ಕುಟುಂಬಕ್ಕೂ ಪರಿಚಿತನಾಗಿದ್ದ ಆತ, ಡೈರಿ ಉತ್ಪನ್ನಗಳನ್ನು ಪೂರೈಸುತ್ತಿದ್ದ.

ತಾನು ಬಂಗಾಳದಿಂದ ಖರೀದಿಸಿದ 4 ಕೆ.ಜಿ. ಮರಳು ತುಂಬಿದ ಚೀಲವನ್ನು ನೀಡಿ, ಇದನ್ನು ಬಿಸಿ ಮಾಡಿದರೆ ಚಿನ್ನವಾಗುತ್ತದೆ ಎಂದು ಆತ ಉದ್ಯಮಿಯನ್ನು ನಂಬಿಸಿದ್ದ. ಉದ್ಯಮಿಯು ಆತನ ಮಾತು ನಂಬಿ, 30 ಲಕ್ಷ ರೂ. ನಗದು ಮತ್ತು 20 ಲಕ್ಷ ರೂ. ಆಭರಣ ನೀಡಿದ್ದರು.

- Advertisement -

ಮರಳನ್ನು ಬಿಸಿ ಮಾಡಿದಾಗ, ತಾನು ಮೋಸ ಹೋಗಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಉದ್ಯಮಿ ಪುಣೆ ಹಡಪ್ ಸರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.    

Join Whatsapp