ಉ. ಪ್ರದೇಶ | ದಲಿತ ಮಕ್ಕಳ ತಟ್ಟೆ ಮುಟ್ಟದ ಮುಖ್ಯೋಪಾಧ್ಯಾಯಿನಿ ವಜಾ

Prasthutha|

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ದಾವೂದಪುರ ಸರಕಾರಿ ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ದಲಿತ ಮಕ್ಕಳ ತಟ್ಟೆ ಮುಟ್ಟದ್ದಕ್ಕಾಗಿ, ಬೇರೆ ಇಟ್ಟದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿಯನ್ನು ಅಮಾನತು ಮಾಡಲಾಗಿದೆ.

- Advertisement -

ತಟ್ಟೆ ಮುಟ್ಟದೆ, ಪರಿಶಿಷ್ಟ ಜಾತಿ ಮಕ್ಕಳ ತಟ್ಟೆ ದೂರ ಇಟ್ಟು, ತೊಳೆಯದೆ ಬಿಟ್ಟ ಇಬ್ಬರು ಅಡುಗೆ ಸಹಾಯಕರನ್ನು ಕೂಡ ಕೆಲಸದಿಂದ ವಜಾ ಮಾಡಲಾಯಿತು. ಈ ಶಾಲೆಯ 80ರಲ್ಲಿ 60 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp