ಕಾರ್ಕಳದಲ್ಲಿ ಬಂಗಾರ ಕದ್ದು ಬಂಟ್ವಾಳದಲ್ಲಿ ಸಿಕ್ಕಿ ಬಿದ್ದರು

Prasthutha|

ಮಂಗಳೂರು: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾ ಕಂಗಿತ್ಲು ಉಷಾ ಅಂಚನ್ ಮನೆಯಲ್ಲಿ ನಡೆದ ಕಳ್ಳತನದ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು, ಕಳವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -


ಬಂಟ್ವಾಳ ಅರಂಬೋಡಿಯ 34ರ ಹರೆಯದ ಪ್ರಸಾದ್ ಮತ್ತು ಕಲ್ಯಾ ಮೂಲದ 39ರ ಹರೆಯದ ಶಿಬಾ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಡಿಸೆಂಬರ್ 3ರಂದು ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆ ಹೋದಾಗ ಈ ಕಳ್ಳತನ ಆಗಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉಷಾ ಅಂಚನ್ ಸ್ನೇಹಿತೆಯೇ ಆಗಿದ್ದ ಶಿಬಾ ತನ್ನ ಗೆಳೆಯ ಪ್ರಸಾದ್’ಗೆ ಮಾಹಿತಿ ನೀಡಿ ಗೆಳತಿ ಜೊತೆಗೆ ಏನೂ ಗೊತ್ತಿಲ್ಲದಂತೆ ಇದ್ದಳು. ಪ್ರಸಾದ್ ಮೇಲೆ ಹಿಂದೆಯೇ ಹತ್ತಾರು ಪ್ರಕರಣಗಳು ಇರುವುದು ತಿಳಿದು ಬಂದಿದೆ.

Join Whatsapp