ಜೆಡಿಎಸ್ ಅಧೋಗತಿಗೆ ತಲುಪಲು ಹೆಚ್.ಡಿ ಕುಮಾರಸ್ವಾಮಿ ಕಾರಣ: ಡಿ.ಎಂ.ವಿಶ್ವನಾಥ್‌

Prasthutha|

ಕನಕಪುರ:  ಜೆಡಿಎಸ್ ಅಧೋಗತಿಗೆ ತಲುಪಲು ಕಾರಣ ಹೆಚ್.ಡಿ ಕುಮಾರಸ್ವಾಮಿ ಅವರ ತಪ್ಪು ನಿರ್ಧಾರಗಳು ಎಂದು ಪಕ್ಷದ  ಮುಖಂಡ ಡಿ.ಎಂ.ವಿಶ್ವನಾಥ್‌ ಹೇಳಿದ್ದಾರೆ.

- Advertisement -

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಪಕ್ಷ ಅಧಿಕಾರಕ್ಕೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದಾಗ ಕುಮಾರಸ್ವಾಮಿ ಅವರು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರ ಬದಲಾಗಿ ಉದ್ಯಮಿಗಳು ಮತ್ತು ಹಣವಂತರನ್ನು ಎಂಎಲ್‌ಸಿ ಮಾಡಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಧಿಕಾರವನ್ನೂ ನೀಡದೆ ಪಕ್ಷದಿಂದ ಯಾರು ಬೇಕಾದರೂ ಹೊರಹೋಗಲಿ ಎಂದು ಉಡಾಫೆಯಾಗಿ ಹೇಳುತ್ತಿದ್ದಾರೆ  ಎಂದು ಆರೋಪಿಸಿದರು.

ನಾವು ಯಾವತ್ತೂ ಮ್ಯಾಚ್‌ ಫಿಕ್ಸಿಂಗ್‌ ರಾಜಕಾರಣ ಮಾಡಿಲ್ಲ. ಆದರೂ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸೋಲಿಸಿದರು. ಗೆದ್ದಿದ್ದ ನನಗೆ ಎಣಿಕೆಯಲ್ಲಿ ಮೋಸ ಮಾಡಿ ಅನ್ಯಾಯ ಮಾಡಿದರು. ಮುಂದಿನ ದಿನಗಳಲ್ಲಿ ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆಯೇ ಹೊರತು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

Join Whatsapp