ಹಾಸನ| ಪಿಎಸ್‌ಐ ನೇಮಕಾತಿ ಅಕ್ರಮ; ಬಂಧಿತ ಆರೋಪಿಯ ಸಹೋದರ ಆತ್ಮಹತ್ಯೆ

Prasthutha|

ಹಾಸನ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ಮೊದಲನೇ ಬಲಿ ಪಡೆದಿದೆ. ಅಕ್ರಮ ಸಂಬಂಧ ಬಂಧಿತರಾಗಿರುವ ಹೊಳೆನರಸೀಪುರ ಅಭ್ಯರ್ಥಿ ಮನು ಕುಮಾರ್ ಅವರ ಹಿರಿಯ ಸಹೋದರ (ಅಣ್ಣ)  ವಾಸು (36) ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -
CID ವಶದಲ್ಲಿರುವ ಮನು

ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್‌ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಕಿರಿಯ ಸಹೋದರ(ತಮ್ಮ)ನ ಪಿಎಸ್‌ಐ ಕೆಲಸಕ್ಕೆಂದು ಮಧ್ಯವರ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಿ ಕೊಟ್ಟಿದ್ದಾರೆ ಎಂದು ಇತ್ತೀಚೆಗೆ  ಕೆಲಸದಿಂದ ವಜಾ ಮಾಡಲಾಗಿತ್ತು ಎನ್ನಲಾಗಿದೆ.  ಇದೀಗ  ಹಣವೂ ಹೋಯ್ತು, ತಮ್ಮನ ಕೆಲಸವೂ ಹೋಯ್ತು ಅಂತ  ಬೇಸರದಿಂದ  ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

- Advertisement -

‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ತಾಯಿ ಶಿವಮ್ಮ ತಿಳಿಸಿದ್ದಾರೆ.

Join Whatsapp