ನನ್ನ ಮಗಳ ಮದುವೆಗೆ ಬಿಜೆಪಿ,ಆರೆಸ್ಸೆಸ್ಸಿನವರಿಗೆ ಪ್ರವೇಶವಿಲ್ಲ ಎಂದ ಜಾಟ್ ಮುಖಂಡ!

Prasthutha|

ಚಂಡೀಗಢ: ತನ್ನ ಮಗಳ ಮದುವೆಯಲ್ಲಿ ಬಿಜೆಪಿ, ಆರೆಸ್ಸೆಸ್ಸಿನವರು ಪಾಲ್ಗೊಳ್ಳಬಾರದೆಂದು ಜಾಟ್ ಮುಖಂಡರೊಬ್ಬರು ಮನವಿ ಮಾಡಿದ ಘಟನೆ ಹರ್ಯಾಣದಲ್ಲಿ ನಡೆದಿದೆ.

- Advertisement -

ವಿಶ್ವವೀರ್ ಜಾಟ್ ಮಹಾಸಭಾದ ರಾಷ್ಟ್ರಾಧ್ಯಕ್ಷ ಮತ್ತು ಜೈ ಜವಾನ್ ಜೈ ಕಿಸಾನ್ ಮಜ್ದೂರ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಜೇಶ್ ಧಂಕರ್ ವಿಶೇಷ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಅವರು ಇಂತಹಾ ವಿನೂತನ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.


ಡಿಸೆಂಬರ್ 1 ರಂದು ನಡೆಯಲಿರುವ ತನ್ನ ಮಗಳ ಮದುವೆಯಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಜೆಜೆಪಿ ಕಾರ್ಯಕರ್ತರು ಭಾಗವಹಿಸಬಾರದು ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

Join Whatsapp