ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರಿಗೆ ಕಿರುಕುಳ; ನಾಲ್ವರ ಬಂಧನ

Prasthutha|

ಬೆಂಗಳೂರು: ಯುವತಿಯರನ್ನು ಕೆಲಸ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಗಳಿಗೆ   ಕರೆದೊಯ್ದು ಬಟ್ಟೆ ತೆಗೆಸಿ ಅರೆನಗ್ನ ದೃಶ್ಯ ಚಿತ್ರೀಕರಿಸಿ, ಸುಲಿಗೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಹಾಲಕ್ಷ್ಮಿಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

- Advertisement -

ಆರೋಪಿಗಳನ್ನು ಚಿಕ್ಕಗೊಲ್ಲರಹಟ್ಟಿಯ ನಿವಾಸಿಗಳಾದ ರವಿ, ಮಂಗಳಾ, ಶ್ರೀನಿವಾಸ್ ಹಾಗೂ  ಶಿವಕುಮಾರ ಎಂದು ಗುರುತಿಸಲಾಗಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ನಿರುದ್ಯೋಗಿ ಮಹಿಳೆಯರನ್ನು ಪತ್ತೆಹಚ್ಚಿ  ಕೆಲಸ ಕೊಡಿಸುವ ನಾಟಕವಾಡುತ್ತಿದ್ದ ಈ ತಂಡವು ಕಂಪನಿಗೆ ಸಂಬಂಧಿಸಿದ ಮುಖ್ಯಸ್ಥರನ್ನು ಭೇಟಿ ಮಾಡಿಸುವ ನೆಪದಲ್ಲಿ ಮಹಿಳೆಯರು, ಯುವತಿಯರನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅಲ್ಲಿ ಅವರನ್ನು ಅರೆ ನಗ್ನಗೊಳಿಸಿ ವಿಡಿಯೊ ಚಿತ್ರೀಕರಿಸಿ, ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಕ್ಕೆ ವೀಡಿಯೋ ಹರಿಯಬಿಡುವ ಬೆದರಿಕೆ ಒಡ್ಡುತ್ತಿದ್ದರು’ ಎಂದು ತಿಳಿದು ಬಂದಿದೆ.

- Advertisement -

ಬಂಧಿತ ಆರೋಪಿಗಳಿಂದ ₹1.2 ಲಕ್ಷದ ಚಿನ್ನಾಭರಣ, ₹70 ಸಾವಿರ ನಗದು, ಎ.ಟಿ.ಎಂ ಕಾರ್ಡ್‌ 1, ಕಾರು, ಮೂರು ಮೊಬೈಲ್‌, ಚಾಕು, ಕಬ್ಬಿಣದ ಪೈಪ್‌, ಬ್ಯಾಟ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 



Join Whatsapp