ಸಚಿವ ಪೂಜಾರಿ ವಿರುದ್ಧ ಗೂಳಿಹಟ್ಟಿ ಗರಂ

Prasthutha|

ಬೆಂಗಳೂರು: ಭೇಟಿಗೆ ಅವಕಾಶ ಸಿಗಲಿಲ್ಲ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಹರಿಹಾಯ್ದ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.

- Advertisement -

ವಿಧಾನಸೌಧದ ಸಚಿವರ ಕಚೇರಿಗೆ ಆಗಮಿಸಿದ ಗೂಳಿಹಟ್ಟಿ ಶೇಖರ್ ಸಚಿವ ಪೂಜಾರಿ ಭೇಟಿಗೆ ತೆರಳಿದ್ದಾರೆ. ಆದರೆ ಪೂಜಾರಿಯವರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪೇ ನೆರೆದಿತ್ತು. ಎಷ್ಟೇ ಹೊತ್ತಾದರೂ ಸಚಿವರನ್ನು ಭೇಟಿ ಮಾಡಲು ಶಾಸಕರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಗೂಳಿಹಟ್ಟಿ ಶೇಖರ್ ಗರಂ ಆಗಿ ಕೋಟಾ ವಿರುದ್ಧ ಹರಿಹಾಯ್ದರು.

ನಾವು ಬುಧವಾರ, ಗುರುವಾರ ಬೆಂಗಳೂರಿಗೆ ಆಗಮಿಸುತ್ತೇವೆ. ಈ ಸಂದರ್ಭದಲ್ಲಿ ಸಚಿವರು ಶಾಸಕರಿಗೆ ಸಿಗಬೇಕು ಹಾಗೂ ಅವರ ಸಮಸ್ಯೆಗೆ ಸ್ಪಂದಿಸಬೇಕು, ನಮ್ಮ ಭೇಟಿಗೆ ಅವಕಾಶ ಸಿಗದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸಚಿವ ಪೂಜಾರಿ ಶಾಸಕರನ್ನು ಸಮಾಧಾನ ಪಡಿಸಿ ಸಮಸ್ಯೆ ಆಲಿಸಿ ಕಳುಹಿಸಿಕೊಟ್ಟರು.

Join Whatsapp